Friday, May 4, 2012
Monday, April 16, 2012
Saturday, April 9, 2011
ಹೈಕೋರ್ಟ್ ಆದೇಶ: ಕೆರೆ ಸಂರಕ್ಷಣೆಗೆ ಅಭಯ
ಹೈಕೋರ್ಟ್ ಮಧ್ಯಪ್ರವೇಶದಿಂದ ನಗರದ ಕೆರೆಗಳಿಗೆ ಕೊನೆಗೂ ಶುಕ್ರದೆಸೆ ಆರಂಭವಾಗಿದೆ. ಕೊಳಕು, ಒತ್ತುವರಿ, ನಿರ್ಲಕ್ಷ್ಯದಿಂದ ನಲುಗಿಹೋಗಿರುವ ಕೆರೆಗಳ ಅಭಿವೃದ್ಧಿ ಮೂರು ವರ್ಷದಿಂದ ಬಹಳಷ್ಟು ಆಶ್ವಾಸನೆಗಳು ಬಂದಿದ್ದರೂ ಈಡೇರಿರಲಿಲ್ಲ. ಆದರೆ, ಈಗ ಹೈಕೋರ್ಟ್ ಸೂಚನೆಯಂತೆ ೧೮೩ ಕೆರೆಗಳು ಶುಚಿಯಾಗುವ ಲಕ್ಷಣಗಳಿವೆ.
ನಗರದಲ್ಲಿರುವ ಎಲ್ಲ ಕೆರೆಗಳನ್ನೂ ಅಭಿವೃದ್ಧಿ ಮಾಡುವುದಾಗಿ ಮೂರು ವರ್ಷದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಎಲ್ಲ ಸಚಿವರು, ಶಾಸಕರು ಹಾಗೂ ಒಂದು ವರ್ಷದಿಂದ ಮೇಯರ್, ಕಾರ್ಪೊರೇಟರ್ಗಳೂ ಹೇಳುತ್ತಿದ್ದಾರೆ. ಆದರೆ, ಈವರೆಗೆ ಒಂದೇ ಒಂದು ಕೆರೆ ಅಭಿವೃದ್ಧಿಯ ದಡ ಮುಟ್ಟಿಲ್ಲ. ಕಾಮಗಾರಿಗಳು ಇನ್ನೂ ಕುಂಟುತ್ತಲೇ ಇವೆ.
ಇನ್ನು, ಕೆರೆಗಳ ಅಭಿವೃದ್ಧಿ ಜವಾಬ್ದಾರಿ ಹೊತ್ತಿರುವ ಕೆರೆ ಅಭಿವೃದ್ಧಿ ಪ್ರಾಧಿಕಾರವಂತೂ ಅಭಿವೃದ್ಧಿಯನ್ನೂ ಮಾಡುವುದಿಲ್ಲ, ಮಾಡುವವರಿಗೆ ಅದನ್ನು ನೀಡುವುದೂ ಇಲ್ಲ. ಎಲ್ಲಕ್ಕೂ ಅಡ್ಡಗಾಲು ಹಾಕುತ್ತಲೇ ಇರುತ್ತದೆ. ನಗರದ ಕೆರೆಗಳ ಅಭಿವೃದ್ಧಿಯನ್ನು ತಾನೇ ಮಾಡುತ್ತೇನೆ ಎಂದಿದ್ದ ಬಿಡಿಎ ಕೂಡ, ೧೧ ಕೆರೆ ಅಭಿವೃದ್ಧಿಯನ್ನು ಇನ್ನೂ ಮುಗಿಸಿಲ್ಲ. ಆದರೆ ವರ್ಷದಿಂದ ವರ್ಷಕ್ಕೆ ೨೦ ಕೆರೆ, ೨೫ ಕೆರೆ ಅಭಿವೃದ್ಧಿಯಾಗುತ್ತದೆ ಎಂದು ಹೇಳುತ್ತಲೇ ಇದೆ.
ಕಂದಾಯ ಇಲಾಖೆಯಿಂದ ನಗರ ವ್ಯಾಪ್ತಿಯ ಎಲ್ಲ ಕೆರೆಗಳ ರಕ್ಷಣೆಯ ಜವಾಬ್ದಾರಿ ವಹಿಸಿಕೊಂಡ ಬಿಬಿಎಂಪಿಯಂತೂ ಇತ್ತ ಗಮನವನ್ನೇ ಹರಿಸಿಲ್ಲ. ಸಾಲದ ಕೂಪದಲ್ಲಿರುವ ಪಾಲಿಕೆ ಕೆರೆಗೆ ಹಣ ಹಾಕಲು ಹಿಂದೇಟು ಹಾಕುತ್ತಿದೆ. ೧೭ ಕೆರೆಗಳು ಅಭಿವೃದ್ಧಿ ಕಾಣುತ್ತಿರುವ ಹಂತದಲ್ಲಿದ್ದರೂ, ಹಣ ಬಿಡುಗಡೆ ಮಾಡದೆ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ-ವಿಶೇಷ ಆಯುಕ್ತರು ಅಲೆಸುತ್ತಿದ್ದಾರೆ. ಹೀಗಾಗಿ, ನಗರದ ಕೆರೆಗಳ ಅಭಿವೃದ್ಧಿ ಸಾಧ್ಯವೇ ಎಂಬ ಪ್ರಶ್ನೆ ದಟ್ಟವಾಗುತ್ತಿತ್ತು. ರಾಜಕಾರಣಿಗಳಿಗೂ ಇದೇ ಬೇಕಿತ್ತು ಎಂದೆನಿಸುತ್ತದೆ. ಎಲ್ಲ ಕೆರೆಗಳು ಒಮ್ಮೆಲೆ ಅಭಿವೃದ್ಧಿಯಾದರೆ ಹೇಳಿಕೊಳ್ಳುವುದಕ್ಕೆ ಏನೂ ಇರುವುದಿಲ್ಲ? ಅದಕ್ಕೇ ನಿಧಾನಗತಿಗೆ ಅಂಟಿಕೊಂಡು, ಒತ್ತುವರಿಗೆ ಉತ್ತೇಜನ ನೀಡುವಂತಿದೆ.
ಇದಕ್ಕೆಲ್ಲ ಹೈಕೋರ್ಟ್ ಸೂಕ್ತ ರೀತಿ ಚಾಟಿ ಏಟು ಬೀಸಿದೆ. ಮೂರು ತಿಂಗಳಲ್ಲಿ ನಗರದ ಎಲ್ಲ ಕೆರೆಗೆ ಗಡಿ ಗುರುತಿಸಿ, ಬೇಲಿ ಹಾಕಬೇಕು. ಹೂಳು ಎತ್ತಿ, ಒಳಚರಂಡಿ ನೀರು ಹರಿಯದಂತೆ ಶುಚಿಗೊಳಿಸಬೇಕು ಎಂದು ತಾಕೀತು ಮಾಡಿದೆ. ಅಲ್ಲದೆ, ಈ ಕಾರ್ಯದ ವರದಿಯನ್ನು ಹೈಕೋರ್ಟ್ಗೇ ಸಲ್ಲಿಸಬೇಕೆಂಬ ಸೂಚನೆ ಶ್ಲಾಘನೀಯ. ಇದರಿಂದಾದರೂ ಅಧಿಕಾರಿಗಳು ನಿರ್ಲಕ್ಷ್ಯಭಾವ ಬಿಟ್ಟು ಕೆಲಸ ಮಾಡುವ ಸಂಭವವಿದೆ. ಇದಕ್ಕೆಲ್ಲ ಮುಖ್ಯವಾಗಿ, ಕೆರೆಗೆ ಜಲಮೂಲವಾಗಿರುವ ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ಒತ್ತುನೀಡಿರುವುದು. ಸ್ಥಳೀಯ ರಾಜಕಾರಣಿಗಳ ಒತ್ತಡಕ್ಕೆ ಮಣಿದು, ರಾಜಕಾಲುವೆ ಒತ್ತುವರಿ ತೆರವಾಗಿಲ್ಲ. ಇದೀಗ ಅದಕ್ಕೆ ಚಾಲನೆ ಸಿಗುವುದು ಜಲಮೂಲಕ್ಕೆ ಸಮಾಧಾನಕರ.
ಕೊನೆಗೂ ಗೆದ್ದ ವೆಂಕಟಸುಬ್ಬರಾವ್
ಜಯನಗರ ಟಿ ಬ್ಲಾಕ್ನಲ್ಲಿರುವ ಬೈರಸಂದ್ರ ಕೆರೆಯನ್ನು ಸರಕಾರಿ ಕೆರೆ ಎಂದು ಹೈಕೋರ್ಟ್ ತೀರ್ಪು ನೀಡುವವರೆಗೆ ಛಲ ಬಿಡದೆ ಹೋರಾಟ ಮಾಡಿದ ವೆಂಕಟಸುಬ್ಬರಾವ್ ಗೆದ್ದಿದ್ದಾರೆ. ೨೦ ವರ್ಷದಿಂದ ಬೈರಸಂದ್ರ ಕೆರೆ ಉಳಿಸಲು ಆರ್ಬಿಐನ ಈ ನಿವೃತ್ತ ನೌಕರ ಸಾಕಷ್ಟು ಶ್ರಮಿಸಿದ್ದಾರೆ. ಈ ಕೆರೆಯನ್ನೇ ಅಡವಿಟ್ಟು, ಬ್ಯಾಂಕ್ನಲ್ಲಿ ಸಾಲ ಪಡೆದುಕೊಂಡಿದ್ದರು. ಅದನ್ನು ಮರುಪಾವತಿಸದೆ ಬ್ಯಾಂಕ್ ಕೆರೆಯನ್ನು ಹರಾಜು ಹಾಕಿತ್ತು. ಬಿಬಿಎಂಪಿ ಕೆರೆ ರಕ್ಷಣೆಯಲ್ಲಿ ಎಡವಿತ್ತು. ಇದನ್ನೆಲ್ಲ ನ್ಯಾಯಾಲಯದಲ್ಲಿ ಪ್ರಶ್ನಿಸಿ, ವರ್ಷಗಟ್ಟಲೆ ಹೋರಾಟ ಮಾಡಿದ ವೆಂಕಟಸುಬ್ಬರಾವ್ ಪರಿಶ್ರಮಕ್ಕೆ ಹೈಕೋರ್ಟ್ನಲ್ಲಿ ಪ್ರತಿಫಲ ದೊರೆತಿದೆ. ಈ ಕೆರೆ ಸರಕಾರಿ ಕೆರೆ. ಇದನ್ನು ಯಾರೂ ಮಾರುವಂತಿಲ್ಲ, ಸಾಲ ನೀಡುವಂತಿಲ್ಲ, ಹರಾಜು ಹಾಕುವಂತಿಲ್ಲ. ಇದನ್ನು ಕೂಡಲೇ ಸುಪರ್ದಿಗೆ ತೆಗೆದುಕೊಂಡು ಅಭಿವೃದ್ಧಿ ಮಾಡಿ ಎಂದು ಹೈಕೋರ್ಟ್ ನಿರ್ದೇಶಿಸಿರುವುದು ಒತ್ತುವರಿದಾರರಿಗೆ ಅಂಕುಶ ಹಾಕಿದಂತಾಗಿದೆ.
೪೩ರಲ್ಲಿ ನೀರಿಲ್ಲ, ೫೯ರಲ್ಲಿ ಮಾಲಿನ್ಯ
ಬಿಬಿಎಂಪಿಯೇ ಅಧಿಕೃತವಾಗಿ ಪ್ರಕಟಿಸಿರುವ ಪಟ್ಟಿಯಂತೆ ಬೆಂಗಳೂರಿನಲ್ಲಿ ೧೯೦ ಕೆರೆಗಳಿವೆ. ನೆನಪಿರಲಿ, ಇದರಲ್ಲಿ ಸಂಪೂರ್ಣವಾಗಿ ಒತ್ತುವರಿಯಾದ, ಬಸ್ ನಿಲ್ದಾಣ-ಆಟದ ಮೈದಾನಗಳಾಗಿ ಪರಿವರ್ತನೆಯಾಗದ ಕೆರೆಗಳು ಸೇರಿಲ್ಲ. ಈ ೧೯೦ ಕೆರೆಗಳನ್ನು ಅಭಿವೃದ್ಧಿಪಡಿಸಿ, ಜಲಮೂಲ ಹೆಚ್ಚಿಸಬಹುದಂತಹವು.
ನಗರದಲ್ಲಿ ಉಳಿದಿರುವ ೧೯೦ ಕೆರೆಗಳ ಪೈಕಿ ೪೩ ಕೆರೆಗಳಲ್ಲಿ ನೀರಿನ ಹರಿವಿಲ್ಲ. ೫೯ ಕೆರೆಗಳು ಕೊಳಕು. ಒಳಚರಂಡಿ ನೀರು ಹಾಗೂ ಮಾಲಿನ್ಯಯುಕ್ತವಾಗಿ ನಲುಗುತ್ತಿವೆ. ಅಲ್ಲದೆ, ಬಹುತೇಕ ಕೆರೆಗಳ ಗಡಿ ನಿರ್ಧಾರವಾಗಿಲ್ಲ. ಬೇಲಿ ಬಿಡಿ, ಒಂದು ಗುರುತನ್ನೂ ಹಾಕಿಲ್ಲ. ಒಂದಷ್ಟು ಒತ್ತಡ ಬಂದರೆ, ಆ ಕೆರೆಯತ್ತ ಇನ್ನೊಂದು ವರ್ಷ ತಿರುಗಿಯೂ ನೋಡುವುದಿಲ್ಲ. ಇಂಥ ಸಂದರ್ಭದಲ್ಲಿ, ಮೂರು ತಿಂಗಳ ಹೈಕೋರ್ಟ್ ಗಡುವು ಲಕ್ಷ್ಮಣರೇಖೆ. ನಗರ ಜನತೆಯ ಪಾಲಿಗೆ ಸಂತಸಸೂಚಕ.
ಇನ್ನು, ಕೆರೆಗಳ ಅಭಿವೃದ್ಧಿ ಜವಾಬ್ದಾರಿ ಹೊತ್ತಿರುವ ಕೆರೆ ಅಭಿವೃದ್ಧಿ ಪ್ರಾಧಿಕಾರವಂತೂ ಅಭಿವೃದ್ಧಿಯನ್ನೂ ಮಾಡುವುದಿಲ್ಲ, ಮಾಡುವವರಿಗೆ ಅದನ್ನು ನೀಡುವುದೂ ಇಲ್ಲ. ಎಲ್ಲಕ್ಕೂ ಅಡ್ಡಗಾಲು ಹಾಕುತ್ತಲೇ ಇರುತ್ತದೆ. ನಗರದ ಕೆರೆಗಳ ಅಭಿವೃದ್ಧಿಯನ್ನು ತಾನೇ ಮಾಡುತ್ತೇನೆ ಎಂದಿದ್ದ ಬಿಡಿಎ ಕೂಡ, ೧೧ ಕೆರೆ ಅಭಿವೃದ್ಧಿಯನ್ನು ಇನ್ನೂ ಮುಗಿಸಿಲ್ಲ. ಆದರೆ ವರ್ಷದಿಂದ ವರ್ಷಕ್ಕೆ ೨೦ ಕೆರೆ, ೨೫ ಕೆರೆ ಅಭಿವೃದ್ಧಿಯಾಗುತ್ತದೆ ಎಂದು ಹೇಳುತ್ತಲೇ ಇದೆ.
ಕಂದಾಯ ಇಲಾಖೆಯಿಂದ ನಗರ ವ್ಯಾಪ್ತಿಯ ಎಲ್ಲ ಕೆರೆಗಳ ರಕ್ಷಣೆಯ ಜವಾಬ್ದಾರಿ ವಹಿಸಿಕೊಂಡ ಬಿಬಿಎಂಪಿಯಂತೂ ಇತ್ತ ಗಮನವನ್ನೇ ಹರಿಸಿಲ್ಲ. ಸಾಲದ ಕೂಪದಲ್ಲಿರುವ ಪಾಲಿಕೆ ಕೆರೆಗೆ ಹಣ ಹಾಕಲು ಹಿಂದೇಟು ಹಾಕುತ್ತಿದೆ. ೧೭ ಕೆರೆಗಳು ಅಭಿವೃದ್ಧಿ ಕಾಣುತ್ತಿರುವ ಹಂತದಲ್ಲಿದ್ದರೂ, ಹಣ ಬಿಡುಗಡೆ ಮಾಡದೆ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ-ವಿಶೇಷ ಆಯುಕ್ತರು ಅಲೆಸುತ್ತಿದ್ದಾರೆ. ಹೀಗಾಗಿ, ನಗರದ ಕೆರೆಗಳ ಅಭಿವೃದ್ಧಿ ಸಾಧ್ಯವೇ ಎಂಬ ಪ್ರಶ್ನೆ ದಟ್ಟವಾಗುತ್ತಿತ್ತು. ರಾಜಕಾರಣಿಗಳಿಗೂ ಇದೇ ಬೇಕಿತ್ತು ಎಂದೆನಿಸುತ್ತದೆ. ಎಲ್ಲ ಕೆರೆಗಳು ಒಮ್ಮೆಲೆ ಅಭಿವೃದ್ಧಿಯಾದರೆ ಹೇಳಿಕೊಳ್ಳುವುದಕ್ಕೆ ಏನೂ ಇರುವುದಿಲ್ಲ? ಅದಕ್ಕೇ ನಿಧಾನಗತಿಗೆ ಅಂಟಿಕೊಂಡು, ಒತ್ತುವರಿಗೆ ಉತ್ತೇಜನ ನೀಡುವಂತಿದೆ.
ಇದಕ್ಕೆಲ್ಲ ಹೈಕೋರ್ಟ್ ಸೂಕ್ತ ರೀತಿ ಚಾಟಿ ಏಟು ಬೀಸಿದೆ. ಮೂರು ತಿಂಗಳಲ್ಲಿ ನಗರದ ಎಲ್ಲ ಕೆರೆಗೆ ಗಡಿ ಗುರುತಿಸಿ, ಬೇಲಿ ಹಾಕಬೇಕು. ಹೂಳು ಎತ್ತಿ, ಒಳಚರಂಡಿ ನೀರು ಹರಿಯದಂತೆ ಶುಚಿಗೊಳಿಸಬೇಕು ಎಂದು ತಾಕೀತು ಮಾಡಿದೆ. ಅಲ್ಲದೆ, ಈ ಕಾರ್ಯದ ವರದಿಯನ್ನು ಹೈಕೋರ್ಟ್ಗೇ ಸಲ್ಲಿಸಬೇಕೆಂಬ ಸೂಚನೆ ಶ್ಲಾಘನೀಯ. ಇದರಿಂದಾದರೂ ಅಧಿಕಾರಿಗಳು ನಿರ್ಲಕ್ಷ್ಯಭಾವ ಬಿಟ್ಟು ಕೆಲಸ ಮಾಡುವ ಸಂಭವವಿದೆ. ಇದಕ್ಕೆಲ್ಲ ಮುಖ್ಯವಾಗಿ, ಕೆರೆಗೆ ಜಲಮೂಲವಾಗಿರುವ ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ಒತ್ತುನೀಡಿರುವುದು. ಸ್ಥಳೀಯ ರಾಜಕಾರಣಿಗಳ ಒತ್ತಡಕ್ಕೆ ಮಣಿದು, ರಾಜಕಾಲುವೆ ಒತ್ತುವರಿ ತೆರವಾಗಿಲ್ಲ. ಇದೀಗ ಅದಕ್ಕೆ ಚಾಲನೆ ಸಿಗುವುದು ಜಲಮೂಲಕ್ಕೆ ಸಮಾಧಾನಕರ.
ಕೊನೆಗೂ ಗೆದ್ದ ವೆಂಕಟಸುಬ್ಬರಾವ್
ಜಯನಗರ ಟಿ ಬ್ಲಾಕ್ನಲ್ಲಿರುವ ಬೈರಸಂದ್ರ ಕೆರೆಯನ್ನು ಸರಕಾರಿ ಕೆರೆ ಎಂದು ಹೈಕೋರ್ಟ್ ತೀರ್ಪು ನೀಡುವವರೆಗೆ ಛಲ ಬಿಡದೆ ಹೋರಾಟ ಮಾಡಿದ ವೆಂಕಟಸುಬ್ಬರಾವ್ ಗೆದ್ದಿದ್ದಾರೆ. ೨೦ ವರ್ಷದಿಂದ ಬೈರಸಂದ್ರ ಕೆರೆ ಉಳಿಸಲು ಆರ್ಬಿಐನ ಈ ನಿವೃತ್ತ ನೌಕರ ಸಾಕಷ್ಟು ಶ್ರಮಿಸಿದ್ದಾರೆ. ಈ ಕೆರೆಯನ್ನೇ ಅಡವಿಟ್ಟು, ಬ್ಯಾಂಕ್ನಲ್ಲಿ ಸಾಲ ಪಡೆದುಕೊಂಡಿದ್ದರು. ಅದನ್ನು ಮರುಪಾವತಿಸದೆ ಬ್ಯಾಂಕ್ ಕೆರೆಯನ್ನು ಹರಾಜು ಹಾಕಿತ್ತು. ಬಿಬಿಎಂಪಿ ಕೆರೆ ರಕ್ಷಣೆಯಲ್ಲಿ ಎಡವಿತ್ತು. ಇದನ್ನೆಲ್ಲ ನ್ಯಾಯಾಲಯದಲ್ಲಿ ಪ್ರಶ್ನಿಸಿ, ವರ್ಷಗಟ್ಟಲೆ ಹೋರಾಟ ಮಾಡಿದ ವೆಂಕಟಸುಬ್ಬರಾವ್ ಪರಿಶ್ರಮಕ್ಕೆ ಹೈಕೋರ್ಟ್ನಲ್ಲಿ ಪ್ರತಿಫಲ ದೊರೆತಿದೆ. ಈ ಕೆರೆ ಸರಕಾರಿ ಕೆರೆ. ಇದನ್ನು ಯಾರೂ ಮಾರುವಂತಿಲ್ಲ, ಸಾಲ ನೀಡುವಂತಿಲ್ಲ, ಹರಾಜು ಹಾಕುವಂತಿಲ್ಲ. ಇದನ್ನು ಕೂಡಲೇ ಸುಪರ್ದಿಗೆ ತೆಗೆದುಕೊಂಡು ಅಭಿವೃದ್ಧಿ ಮಾಡಿ ಎಂದು ಹೈಕೋರ್ಟ್ ನಿರ್ದೇಶಿಸಿರುವುದು ಒತ್ತುವರಿದಾರರಿಗೆ ಅಂಕುಶ ಹಾಕಿದಂತಾಗಿದೆ.
೪೩ರಲ್ಲಿ ನೀರಿಲ್ಲ, ೫೯ರಲ್ಲಿ ಮಾಲಿನ್ಯ
ಬಿಬಿಎಂಪಿಯೇ ಅಧಿಕೃತವಾಗಿ ಪ್ರಕಟಿಸಿರುವ ಪಟ್ಟಿಯಂತೆ ಬೆಂಗಳೂರಿನಲ್ಲಿ ೧೯೦ ಕೆರೆಗಳಿವೆ. ನೆನಪಿರಲಿ, ಇದರಲ್ಲಿ ಸಂಪೂರ್ಣವಾಗಿ ಒತ್ತುವರಿಯಾದ, ಬಸ್ ನಿಲ್ದಾಣ-ಆಟದ ಮೈದಾನಗಳಾಗಿ ಪರಿವರ್ತನೆಯಾಗದ ಕೆರೆಗಳು ಸೇರಿಲ್ಲ. ಈ ೧೯೦ ಕೆರೆಗಳನ್ನು ಅಭಿವೃದ್ಧಿಪಡಿಸಿ, ಜಲಮೂಲ ಹೆಚ್ಚಿಸಬಹುದಂತಹವು.
ನಗರದಲ್ಲಿ ಉಳಿದಿರುವ ೧೯೦ ಕೆರೆಗಳ ಪೈಕಿ ೪೩ ಕೆರೆಗಳಲ್ಲಿ ನೀರಿನ ಹರಿವಿಲ್ಲ. ೫೯ ಕೆರೆಗಳು ಕೊಳಕು. ಒಳಚರಂಡಿ ನೀರು ಹಾಗೂ ಮಾಲಿನ್ಯಯುಕ್ತವಾಗಿ ನಲುಗುತ್ತಿವೆ. ಅಲ್ಲದೆ, ಬಹುತೇಕ ಕೆರೆಗಳ ಗಡಿ ನಿರ್ಧಾರವಾಗಿಲ್ಲ. ಬೇಲಿ ಬಿಡಿ, ಒಂದು ಗುರುತನ್ನೂ ಹಾಕಿಲ್ಲ. ಒಂದಷ್ಟು ಒತ್ತಡ ಬಂದರೆ, ಆ ಕೆರೆಯತ್ತ ಇನ್ನೊಂದು ವರ್ಷ ತಿರುಗಿಯೂ ನೋಡುವುದಿಲ್ಲ. ಇಂಥ ಸಂದರ್ಭದಲ್ಲಿ, ಮೂರು ತಿಂಗಳ ಹೈಕೋರ್ಟ್ ಗಡುವು ಲಕ್ಷ್ಮಣರೇಖೆ. ನಗರ ಜನತೆಯ ಪಾಲಿಗೆ ಸಂತಸಸೂಚಕ.
Sunday, September 26, 2010
ತಿಪ್ಪಗೊಂಡನಹಳ್ಳಿಗೆ 3, ಹೆಸರಘಟ್ಟಕ್ಕೆ 6 ಅಡಿ ನೀರು
ನಗರ ಹಾಗೂ ಸುತ್ತಮುತ್ತ ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದ ಕೆಲವು ಭಾಗಗಳಲ್ಲಿ ಸಮಸ್ಯೆ ಎದುರಾಗಿ ಬೇಸರಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ನಗರಕ್ಕೆ ಜಲಮೂಲವಾಗಿರುವ ತಿಪ್ಪಗೊಂಡನಹಳ್ಳಿ ಹಾಗೂ ಹೆಸರಘಟ್ಟಕ್ಕೆ ಹೆಚ್ಚಿನ ನೀರು ಹರಿದು ಸಂತಸ ಮೂಡಿಸಿದೆ.
ಹೆಸರಘಟ್ಟ ಅಣೆಕಟ್ಟು ಜಲಾನಯನ ಪ್ರದೇಶದಲ್ಲಿ ಶುಕ್ರವಾರ ರಾತ್ರಿ 129.5 ಮಳೆ ಸುರಿದಿದ್ದು, ಶನಿವಾರವೂ ಮಳೆಯಾಗಿತ್ತು. ನೀರಿನ ಹರಿವು ಹೆಚ್ಚಾದ್ದರಿಂದ, ಹೆಸರಘಟ್ಟ ಅಣೆಕಟ್ಟೆಯಲ್ಲಿ 6 ಅಡಿ ನೀರು ತುಂಬಿದೆ. ಅರ್ಕಾವತಿ ನದಿಯ ಹರಿವನ್ನೇ ಅವಲಂಬಿಸಿರುವ ಹೆಸರಘಟ್ಟ ಜಲಾಶಯಕ್ಕೆ ಇದೀಗ ಸುತ್ತಮುತ್ತಲಿನಿಂದ ಮಾತ್ರ ನೀರು ಹರಿದಿರುವುದರಿಂದ 6 ಅಡಿ ತುಂಬಿದೆ. ಇನ್ನೊಂದೆರಡು ದಿನ ಮಳೆ ಹೀಗೆ ಮುಂದುವರಿದರೆ, 10 ಅಡಿ ನೀರು ಸಂಗ್ರಹವಾಗಿ ದಾಖಲೆಯಾಗುವ ಸಾಧ್ಯತೆ ಇದೆ.
ಹೆಸರಘಟ್ಟದಲ್ಲಿ 6 ಅಡಿ ನೀರು ಬಂದಿರುವುದರಿಂದ ಆ ನೀರನ್ನು ಸರಬರಾಜು ಮಾಡಲು ಸಾಧ್ಯವೇನೂ ಇಲ್ಲ. ಆದರೆ, ಈ ಅಣೆಕಟ್ಟೆ ನೀರು ಇಲ್ಲದೆ ಸೊರಗುತ್ತಿದ್ದ ಸಂದರ್ಭದಲ್ಲಿ ಒಂದೇ ದಿನ ಸುಮಾರು ನಾಲ್ಕು ಅಡಿ ನೀರು ಬಂದಿರುವುದು ಸಂತಸಕರ ಎಂದು ಅಣೆಕಟ್ಟೆ ವ್ಯಾಪ್ತಿಯ ನೇತೃತ್ವ ವಹಿಸಿರುವ ಜಲಮಂಡಳಿಯ ಮುಖ್ಯ ಎಂಜಿನಿಯರ್ (ನಿರ್ವಹಣೆ) ಟಿ. ವೆಂಕಟರಾಜು ತಿಳಿಸಿದರು.
ಬೆಂಗಳೂರಿನ ಪಶ್ಚಿಮ ಭಾಗಕ್ಕೆ ಕುಡಿಯುವ ನೀರು ಒದಗಿಸುವ ತಿಪ್ಪಗೊಂಡನಹಳ್ಳಿಗೆ ಜಲಾಶಯಕ್ಕೆ ಶುಕ್ರವಾರ ಒಂದೇ ರಾತ್ರಿ ಸುಮಾರು ಮೂರು ಅಡಿ ನೀರು ಬಂದಿದೆ. ಶುಕ್ರವಾರ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಶಿವಗಂಗೆಯಲ್ಲಿ ಹುಟ್ಟುವ ಅರ್ಕಾವತಿಯ ಉಪನದಿ ಕುಮುದ್ವತಿ ಹರಿವು ಹೆಚ್ಚಾಗಿ ಈ ಸಂಗ್ರಹ ಸಾಧ್ಯವಾಗಿದೆ.
ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನ ಮಟ್ಟ ಸೆ.24 ರಂದು 13.6 ನೀರಿತ್ತು. ಸೆ.26 ಬೆಳಗ್ಗೆ ಈ ಮಟ್ಟ 13.6 ಅಡಿಗೆ ಹೆಚ್ಚಿದೆ. ಶಿವಗಂಗೆ ಸುತ್ತಮುತ್ತ ಮಳೆ ಹೆಚ್ಚಾದ್ದರಿಂದ ನೀರು ಹರಿವು ಹೆಚ್ಚಾಗಿದೆ. ಪ್ರತಿ ದಿನ 18 ದಶಲಕ್ಷ ಲೀಟರ್ ನೀರು ಇಲ್ಲಿಂದ ಪೂರೈಕೆಯಾಗುತ್ತಿದೆ. ವರುಣನ ಕೃಪೆ ಇದ್ದು ಮುಂದಿನ ಒಂದು ವಾರ ಈ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದರೆ ಜಲಾಶಯಕ್ಕೆ ಇನ್ನಷ್ಟು ನೀರು ಬರುತ್ತದೆ. ಇದರಿಂದ ನಗರಕ್ಕೆ ಹೆಚ್ಚಿನ ನೀರು ಪೂರೈಸಬಹುದಾಗಿದೆ ಎಂದು ತಿಪ್ಪಗೊಂಡನಹಳ್ಳಿ ಜಲಾಶಯದ ನೇತೃತ್ವ ವಹಿಸಿರುವ ಜಲಮಂಡಳಿಯ ಅಪರ ಮುಖ್ಯ ಎಂಜಿನಿಯರ್ ರೂಪ್ಕುಮಾರ್ ತಿಳಿಸಿದರು.
ತಿಪ್ಪಗೊಂಡನಹಳ್ಳಿ ಹಾಗೂ ಹೆಸರಘಟ್ಟ ಜಲಾಶಯಗಳ ಜಲಮೂಲ ಅರ್ಕಾವತಿ ನದಿ. ಈ ನದಿ ಹರಿಸುವ ಪ್ರಯತ್ನ ಆರಂಭವಾಗಿದ್ದರೂ ಅದಕ್ಕೊಂದು ನಿರ್ದಿಷ್ಟ ರೂಪ ನೀಡುವಲ್ಲಿ ಎಲ್ಲರೂ ವಿಫಲರಾಗಿದ್ದಾರೆ. ಶಾಸಕ ವಿಶ್ವನಾಥ್ ನೇತೃತ್ವದಲ್ಲಿ ಶಾಸಕ ಮುನಿರಾಜು ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿಯವರೆಗೆ ಪಾದಯಾತ್ರೆ ಮಾಡಿ ನದಿ ಹರಿಸಲು, ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಈ ಪ್ರಯತ್ನಕ್ಕೆ ಸಂಸದ ಅನಂತಕುಮಾರ್ ಸೇರಿದಂತೆ ಸಚಿವರಾದ ಆರ್. ಅಶೋಕ್, ಸುರೇಶ್ಕುಮಾರ್ ಶಹಭ್ಬಾಸ್ಗಿರಿ ನೀಡಿ, ನದಿ ಪುನಶ್ಚೇತನದ ಭರವಸೆ ನೀಡಿದ್ದರು. ಆದರೆ ಈ ಪ್ರಕ್ರಿಯೆಯಲ್ಲ ಮುಗಿದು ಒಂದು ವರ್ಷವಾದರೂ ಈವರೆಗೆ ಯಾರೂ ನಿರ್ದಿಷ್ಟ ಹೆಜ್ಜೆ ಇರಿಸಿ ಕಾರ್ಯನಿರ್ವಹಿಸದಿರುವುದು ಶೋಚನೀಯ.
ಹೆಸರಘಟ್ಟ ಅಣೆಕಟ್ಟು ಜಲಾನಯನ ಪ್ರದೇಶದಲ್ಲಿ ಶುಕ್ರವಾರ ರಾತ್ರಿ 129.5 ಮಳೆ ಸುರಿದಿದ್ದು, ಶನಿವಾರವೂ ಮಳೆಯಾಗಿತ್ತು. ನೀರಿನ ಹರಿವು ಹೆಚ್ಚಾದ್ದರಿಂದ, ಹೆಸರಘಟ್ಟ ಅಣೆಕಟ್ಟೆಯಲ್ಲಿ 6 ಅಡಿ ನೀರು ತುಂಬಿದೆ. ಅರ್ಕಾವತಿ ನದಿಯ ಹರಿವನ್ನೇ ಅವಲಂಬಿಸಿರುವ ಹೆಸರಘಟ್ಟ ಜಲಾಶಯಕ್ಕೆ ಇದೀಗ ಸುತ್ತಮುತ್ತಲಿನಿಂದ ಮಾತ್ರ ನೀರು ಹರಿದಿರುವುದರಿಂದ 6 ಅಡಿ ತುಂಬಿದೆ. ಇನ್ನೊಂದೆರಡು ದಿನ ಮಳೆ ಹೀಗೆ ಮುಂದುವರಿದರೆ, 10 ಅಡಿ ನೀರು ಸಂಗ್ರಹವಾಗಿ ದಾಖಲೆಯಾಗುವ ಸಾಧ್ಯತೆ ಇದೆ.
ಹೆಸರಘಟ್ಟದಲ್ಲಿ 6 ಅಡಿ ನೀರು ಬಂದಿರುವುದರಿಂದ ಆ ನೀರನ್ನು ಸರಬರಾಜು ಮಾಡಲು ಸಾಧ್ಯವೇನೂ ಇಲ್ಲ. ಆದರೆ, ಈ ಅಣೆಕಟ್ಟೆ ನೀರು ಇಲ್ಲದೆ ಸೊರಗುತ್ತಿದ್ದ ಸಂದರ್ಭದಲ್ಲಿ ಒಂದೇ ದಿನ ಸುಮಾರು ನಾಲ್ಕು ಅಡಿ ನೀರು ಬಂದಿರುವುದು ಸಂತಸಕರ ಎಂದು ಅಣೆಕಟ್ಟೆ ವ್ಯಾಪ್ತಿಯ ನೇತೃತ್ವ ವಹಿಸಿರುವ ಜಲಮಂಡಳಿಯ ಮುಖ್ಯ ಎಂಜಿನಿಯರ್ (ನಿರ್ವಹಣೆ) ಟಿ. ವೆಂಕಟರಾಜು ತಿಳಿಸಿದರು.
ಬೆಂಗಳೂರಿನ ಪಶ್ಚಿಮ ಭಾಗಕ್ಕೆ ಕುಡಿಯುವ ನೀರು ಒದಗಿಸುವ ತಿಪ್ಪಗೊಂಡನಹಳ್ಳಿಗೆ ಜಲಾಶಯಕ್ಕೆ ಶುಕ್ರವಾರ ಒಂದೇ ರಾತ್ರಿ ಸುಮಾರು ಮೂರು ಅಡಿ ನೀರು ಬಂದಿದೆ. ಶುಕ್ರವಾರ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಶಿವಗಂಗೆಯಲ್ಲಿ ಹುಟ್ಟುವ ಅರ್ಕಾವತಿಯ ಉಪನದಿ ಕುಮುದ್ವತಿ ಹರಿವು ಹೆಚ್ಚಾಗಿ ಈ ಸಂಗ್ರಹ ಸಾಧ್ಯವಾಗಿದೆ.
ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನ ಮಟ್ಟ ಸೆ.24 ರಂದು 13.6 ನೀರಿತ್ತು. ಸೆ.26 ಬೆಳಗ್ಗೆ ಈ ಮಟ್ಟ 13.6 ಅಡಿಗೆ ಹೆಚ್ಚಿದೆ. ಶಿವಗಂಗೆ ಸುತ್ತಮುತ್ತ ಮಳೆ ಹೆಚ್ಚಾದ್ದರಿಂದ ನೀರು ಹರಿವು ಹೆಚ್ಚಾಗಿದೆ. ಪ್ರತಿ ದಿನ 18 ದಶಲಕ್ಷ ಲೀಟರ್ ನೀರು ಇಲ್ಲಿಂದ ಪೂರೈಕೆಯಾಗುತ್ತಿದೆ. ವರುಣನ ಕೃಪೆ ಇದ್ದು ಮುಂದಿನ ಒಂದು ವಾರ ಈ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದರೆ ಜಲಾಶಯಕ್ಕೆ ಇನ್ನಷ್ಟು ನೀರು ಬರುತ್ತದೆ. ಇದರಿಂದ ನಗರಕ್ಕೆ ಹೆಚ್ಚಿನ ನೀರು ಪೂರೈಸಬಹುದಾಗಿದೆ ಎಂದು ತಿಪ್ಪಗೊಂಡನಹಳ್ಳಿ ಜಲಾಶಯದ ನೇತೃತ್ವ ವಹಿಸಿರುವ ಜಲಮಂಡಳಿಯ ಅಪರ ಮುಖ್ಯ ಎಂಜಿನಿಯರ್ ರೂಪ್ಕುಮಾರ್ ತಿಳಿಸಿದರು.
ತಿಪ್ಪಗೊಂಡನಹಳ್ಳಿ ಹಾಗೂ ಹೆಸರಘಟ್ಟ ಜಲಾಶಯಗಳ ಜಲಮೂಲ ಅರ್ಕಾವತಿ ನದಿ. ಈ ನದಿ ಹರಿಸುವ ಪ್ರಯತ್ನ ಆರಂಭವಾಗಿದ್ದರೂ ಅದಕ್ಕೊಂದು ನಿರ್ದಿಷ್ಟ ರೂಪ ನೀಡುವಲ್ಲಿ ಎಲ್ಲರೂ ವಿಫಲರಾಗಿದ್ದಾರೆ. ಶಾಸಕ ವಿಶ್ವನಾಥ್ ನೇತೃತ್ವದಲ್ಲಿ ಶಾಸಕ ಮುನಿರಾಜು ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿಯವರೆಗೆ ಪಾದಯಾತ್ರೆ ಮಾಡಿ ನದಿ ಹರಿಸಲು, ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಈ ಪ್ರಯತ್ನಕ್ಕೆ ಸಂಸದ ಅನಂತಕುಮಾರ್ ಸೇರಿದಂತೆ ಸಚಿವರಾದ ಆರ್. ಅಶೋಕ್, ಸುರೇಶ್ಕುಮಾರ್ ಶಹಭ್ಬಾಸ್ಗಿರಿ ನೀಡಿ, ನದಿ ಪುನಶ್ಚೇತನದ ಭರವಸೆ ನೀಡಿದ್ದರು. ಆದರೆ ಈ ಪ್ರಕ್ರಿಯೆಯಲ್ಲ ಮುಗಿದು ಒಂದು ವರ್ಷವಾದರೂ ಈವರೆಗೆ ಯಾರೂ ನಿರ್ದಿಷ್ಟ ಹೆಜ್ಜೆ ಇರಿಸಿ ಕಾರ್ಯನಿರ್ವಹಿಸದಿರುವುದು ಶೋಚನೀಯ.
Saturday, May 29, 2010
ಅರ್ಕಾವತಿ ನದಿ ಪಾತ್ರ ಶುಚಿಗೆ ಮುಹೂರ್ತ
ಎಲ್ಲ ಒತ್ತುವರಿ ತೆರವುಗೊಳಿಸಲು ಜಲಮಂಡಲಿ ಸಚಿವರ ಕಟ್ಟಪ್ಟಣೆ
ಅರ್ಕಾವತಿ ನದಿ ಪಾತ್ರದ ಶುಚಿ ಕಾರ್ಯ ಕೂಡಲೇ ಪ್ರಾರಂಭ ಮಾಡಿ ನೀರು ಹರಿವಿಗೆ ತಡೆಯಾಗಿರುವ ಎಲ್ಲ ರೀತಿಯ ಒತ್ತುವರಿಯನ್ನೂ ತೆರವು ಮಾಡಬೇಕೆಂದು ಜಲಮಂಡಲಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕಟ್ಟಪ್ಪಣೆ ಮಾಡಿದ್ದಾರೆ. ಸೋಮವಾರದಿಂದ ಕಾಲುವೆ ಶುಚಿ ಆರಂಭವಾಗಲಿದೆ.
ನಂದಿಬೆಟ್ಟದ ತಪ್ಪಲಿನಿಂದ ಹೆಸರಘಟ್ಟ-ತಿಪ್ಪಗೊಂಡನಹಳ್ಳಿ ಜಲಾಶಯದವರೆಗಿನ ನದಿ ಪಾತ್ರದಲ್ಲಿರುವ ಹೂಳು, ಗಿಡ-ಮರಗಳನ್ನು ಗುರುವಾರದಿಂದಲೇ ತೆರವುಗೊಳಿಸಬೇಕು. ಕಾಲುವೆ ಒತ್ತುವರಿಯ ಕಟ್ಟಡ ಅಥವಾ ಇನ್ಯಾವುದೇ ರೀತಿಯ ತಡೆ ಬಂದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ನಗರ-ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಅರ್ಕಾವತಿ ನದಿ ಪಾತ್ರ ಈ ಮಳೆಗಾಲದಲ್ಲಿ ಕಾಣಬೇಕು. ಎಲ್ಲಿಯೂ ಒತ್ತುವರಿ ಉಳಿಸಬಾರದು. ಇದಕ್ಕೆ ಸಕ್ರಿಯ ಕಾಮಗಾರಿ ಕೂಡಲೇ ಆರಂಭವಾಗಬೇಕಾದ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳ ಸಮಿತಿಯನ್ನೂ ರಚಿಸಲಾಗಿದೆ. ಕಾವೇರಿ ಜಲನಿಗಮ, ಸಣ್ಣ ನೀರಾವರಿ, ಮಾಲಿನ್ಯ ನಿಯಂತ್ರಣ ಮಂಡಳಿ, ಭೂಗರ್ಭ ಇಲಾಖೆ, ನಗರ-ಗ್ರಾಮಾಂತರ, ರಾಮನಗರ ಜಿಲ್ಲಾಧಿಕಾರಿಗಳು ಈ ಸಮಿತಿಯಲ್ಲಿದ್ದು, ಜಲಮಂಡಳಿಯ ಮುಖ್ಯ ಎಂಜಿನಿಯರ್ ಬಸವರಾಜ್ ಸಮಿತಿಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಸಮಿತಿ ತತ್ಕ್ಷಣದಿಂದ ಕಾರ್ಯ ಆರಂಭಿಸಿದ್ದು, ನದಿಪಾತ್ರ ಸಮೀಕ್ಷೆ ನಡೆದಿದೆ. ಸೋಮವಾರದಿಂದ ಶುಚಿ ಕಾರ್ಯ ಆರಂಭವಾಗಲಿದೆ.
ಜಲಮಂಡಲಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅರ್ಕಾವತಿ ನದಿ ಪುನಶ್ಚೇತನ ಪಾದಯಾತ್ರೆ ಉದ್ಘಾಟಿಸಿದ್ದ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಮಂಗಳವಾರ ಭೇಟಿ ನೀಡಿದ್ದರು. ಜಲಾಶಯದಲ್ಲಿ ನೀರಿನ ಕೊರತೆ ಹಾಗೂ ಬೆಂಗಳೂರಿಗೆ ಭವಿಷ್ಯದಲ್ಲಿ ನೀರುಣಿಸುವ ದೂರದೃಷ್ಟಿಯ ಯೋಜನೆಯಡಿ ಅರ್ಕಾವತಿ ನದಿ ಪುನಶ್ಚೇತನಕ್ಕೆ ಒತ್ತು ನೀಡಲು ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.
ಅರ್ಕಾವತಿ ನದಿ ಮೂಲದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಒಂದಷ್ಟು ದೂರ ನಡೆದಿದ್ದ ಸುರೇಶ್ ಕುಮಾರ್, ನದಿ ಪಾತ್ರದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿಲ್ಲ. ಅದರ ಹರಿವು ವಿಮುಖವಾಗಿದೆ. ಅದನ್ನು ಸುಸ್ಥಿತಿಗೆ ತಂದು ನದಿ ಹರಿಯುವಂತೆ ಮಾಡಬೇಕು. ಈ ಮಳೆಗಾಲದಲ್ಲಿ ನದಿ ಪಾತ್ರ ಕಾಣುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನದಿ ಪಾತ್ರ ಮಾಲಿನ್ಯಗೊಳಿಸುತ್ತಿರುವ ಕಾರ್ಖಾನೆಗಳನ್ನೂ ತೆರವುಗೊಳಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೆ ತಂದಾಗ, ೭೯ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ. ಅವುಗಳ ತೆರವು ಕಾರ್ಯ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ಮಂಡಲಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
“ಅರ್ಕಾವತಿ ನದಿ ಪುನಶ್ಚೇತನಕ್ಕೆ ನಾವು ಬದ್ಧರಾಗಿದ್ದೇವೆ. ಒತ್ತುವರಿಯನ್ನು ಸಂಪೂರ್ಣ ರೀತಿಯಲ್ಲಿ ತೆರವುಗೊಳಿಸಲು ಹಾಗೂ ಸಮಗ್ರ ರೀತಿಯಲ್ಲಿ ಕಾಮಗಾರಿ ನಡೆಸಲು ಕೆಲವು ಅಧಿಕಾರಗಳ ಅಗತ್ಯವಿದೆ. ಇದಕ್ಕಾಗಿ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಯವರಿಂದ ಒಪ್ಪಿಗೆ ಪಡೆದು ಸಮಗ್ರವಾಗಿ ಕಾಮಗಾರಿ ಆರಂಭಿಸಲಿದ್ದೇವೆ. ಒಟ್ಟಿನಲ್ಲಿ ಮಳೆಗಾಲದಲ್ಲಿ ಅರ್ಕಾವತಿ ನದಿ ಪಾತ್ರವನ್ನು ಶುಚಿಗೊಳಿಸುವ ಯೋಜನೆ ನಮ್ಮದಾಗಿದೆ."ಅರ್ಕಾವತಿ ನದಿ ಪಾತ್ರದ ಶುಚಿ ಕಾರ್ಯ ಕೂಡಲೇ ಪ್ರಾರಂಭ ಮಾಡಿ ನೀರು ಹರಿವಿಗೆ ತಡೆಯಾಗಿರುವ ಎಲ್ಲ ರೀತಿಯ ಒತ್ತುವರಿಯನ್ನೂ ತೆರವು ಮಾಡಬೇಕೆಂದು ಜಲಮಂಡಲಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕಟ್ಟಪ್ಪಣೆ ಮಾಡಿದ್ದಾರೆ. ಸೋಮವಾರದಿಂದ ಕಾಲುವೆ ಶುಚಿ ಆರಂಭವಾಗಲಿದೆ.
ನಂದಿಬೆಟ್ಟದ ತಪ್ಪಲಿನಿಂದ ಹೆಸರಘಟ್ಟ-ತಿಪ್ಪಗೊಂಡನಹಳ್ಳಿ ಜಲಾಶಯದವರೆಗಿನ ನದಿ ಪಾತ್ರದಲ್ಲಿರುವ ಹೂಳು, ಗಿಡ-ಮರಗಳನ್ನು ಗುರುವಾರದಿಂದಲೇ ತೆರವುಗೊಳಿಸಬೇಕು. ಕಾಲುವೆ ಒತ್ತುವರಿಯ ಕಟ್ಟಡ ಅಥವಾ ಇನ್ಯಾವುದೇ ರೀತಿಯ ತಡೆ ಬಂದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ನಗರ-ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಅರ್ಕಾವತಿ ನದಿ ಪಾತ್ರ ಈ ಮಳೆಗಾಲದಲ್ಲಿ ಕಾಣಬೇಕು. ಎಲ್ಲಿಯೂ ಒತ್ತುವರಿ ಉಳಿಸಬಾರದು. ಇದಕ್ಕೆ ಸಕ್ರಿಯ ಕಾಮಗಾರಿ ಕೂಡಲೇ ಆರಂಭವಾಗಬೇಕಾದ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳ ಸಮಿತಿಯನ್ನೂ ರಚಿಸಲಾಗಿದೆ. ಕಾವೇರಿ ಜಲನಿಗಮ, ಸಣ್ಣ ನೀರಾವರಿ, ಮಾಲಿನ್ಯ ನಿಯಂತ್ರಣ ಮಂಡಳಿ, ಭೂಗರ್ಭ ಇಲಾಖೆ, ನಗರ-ಗ್ರಾಮಾಂತರ, ರಾಮನಗರ ಜಿಲ್ಲಾಧಿಕಾರಿಗಳು ಈ ಸಮಿತಿಯಲ್ಲಿದ್ದು, ಜಲಮಂಡಳಿಯ ಮುಖ್ಯ ಎಂಜಿನಿಯರ್ ಬಸವರಾಜ್ ಸಮಿತಿಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಸಮಿತಿ ತತ್ಕ್ಷಣದಿಂದ ಕಾರ್ಯ ಆರಂಭಿಸಿದ್ದು, ನದಿಪಾತ್ರ ಸಮೀಕ್ಷೆ ನಡೆದಿದೆ. ಸೋಮವಾರದಿಂದ ಶುಚಿ ಕಾರ್ಯ ಆರಂಭವಾಗಲಿದೆ.
ಜಲಮಂಡಲಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅರ್ಕಾವತಿ ನದಿ ಪುನಶ್ಚೇತನ ಪಾದಯಾತ್ರೆ ಉದ್ಘಾಟಿಸಿದ್ದ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಮಂಗಳವಾರ ಭೇಟಿ ನೀಡಿದ್ದರು. ಜಲಾಶಯದಲ್ಲಿ ನೀರಿನ ಕೊರತೆ ಹಾಗೂ ಬೆಂಗಳೂರಿಗೆ ಭವಿಷ್ಯದಲ್ಲಿ ನೀರುಣಿಸುವ ದೂರದೃಷ್ಟಿಯ ಯೋಜನೆಯಡಿ ಅರ್ಕಾವತಿ ನದಿ ಪುನಶ್ಚೇತನಕ್ಕೆ ಒತ್ತು ನೀಡಲು ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.
ಅರ್ಕಾವತಿ ನದಿ ಮೂಲದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಒಂದಷ್ಟು ದೂರ ನಡೆದಿದ್ದ ಸುರೇಶ್ ಕುಮಾರ್, ನದಿ ಪಾತ್ರದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿಲ್ಲ. ಅದರ ಹರಿವು ವಿಮುಖವಾಗಿದೆ. ಅದನ್ನು ಸುಸ್ಥಿತಿಗೆ ತಂದು ನದಿ ಹರಿಯುವಂತೆ ಮಾಡಬೇಕು. ಈ ಮಳೆಗಾಲದಲ್ಲಿ ನದಿ ಪಾತ್ರ ಕಾಣುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನದಿ ಪಾತ್ರ ಮಾಲಿನ್ಯಗೊಳಿಸುತ್ತಿರುವ ಕಾರ್ಖಾನೆಗಳನ್ನೂ ತೆರವುಗೊಳಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೆ ತಂದಾಗ, ೭೯ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ. ಅವುಗಳ ತೆರವು ಕಾರ್ಯ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ಮಂಡಲಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
-ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಲಮಂಡಲಿ, ವಸತಿ ಸಚಿವರು
Subscribe to:
Posts (Atom)


