Friday, July 26, 2013

ಸರ್ಕಾರಿ ಭೂಮಿ ಒತ್ತು'ವರಿ'-10 ಎಚ್ .ಡಿ.ಕುಮಾರಸ್ವಾಮಿ ಸಂದರ್ಶನ


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 24-07-2013

ಸರ್ಕಾರಿ ಭೂಮಿ ಒತ್ತು'ವರಿ': ಎಚ್ .ಡಿ. ಕುಮಾರಸ್ವಾಮಿ ಸಂದರ್ಶನ 

ರಾಜಕಾರಣಿಗಳಿಂದಲೇ ಭೂ ಕಬಳಿಕೆ!

ರಾಜಕಾರಣಿಗಳು, ಹಿಂಬಾಲಕರು, ಹಿತೈಷಿಗಳೂ ಎಲ್ಲರೂ ಫಲಾನುಭವಿಗಳು

Kere Manjunath ಕೆರೆ ಮಂಜುನಾಥ್ 

ವಿ. ಬಾಲಸುಬ್ರಮಣಿಯನ್ ಕಾರ್ಯಪಡೆ ವರದಿಯಂತೆ ಈಗಲಾದರೂ ಸರ್ಕಾರ ತತ್ , ಕ್ಷಣದಿಂದಲೇ ಒತ್ತುವರಿ ತೆರವುಗೊಳಿಸಬೇಕು ಎಂದು ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ | ಬೆಂಗಳೂರು | ಜು.23 ರಾಜಕಾರಣಿಗಳು, ಅವರ ಹಿಂಬಾಲಕರು ಹಿತೈಷಿಗಳೂ ಸರ್ಕಾರಿ ಭೂ ಕಬಳಿಕೆಯಲ್ಲಿ ಇದ್ದಾರೆ. ಇದರಲ್ಲಿ ಪಕ್ಷ ಬೇಡ ಇಲ್ಲ. ಎಲ್ಲ ನಾಯಕರ ಜತೆ ಒಡನಾಟ ಇಟ್ಟುಕೊಂಡವರು ಭೂಮಿ ಕಬಳಿಸಿದ್ದಾರೆ. ಸರ್ಕಾರ ಸಮಯ ವ್ಯರ್ಥ ಮಾಡಬಾರದು. ಈ ನಿಟ್ಟಿನಲ್ಲಿ ಅತ್ಯಂತ ಕಠಿಣ ನಿರ್ಧಾರ ಮಾಡಬೇಕು.....
ನನ್ನ ಅವಧಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು: ವಿಚಾರದಲ್ಲಿ ಯಾವುದೇ ಒತ್ತಡದ ಪ್ರಶ್ನೆಯೇ ಇರಲಿಲ್ಲ. ಹೀಗಾಗಿ, 900) ಎಕರೆ ಭೂಮಿ ವಾಪಸ್ ಪಡೆಯಲಾ ಯಿತು. ನಂತರ ಬಂದ ಸರ್ಕಾರಗಳು ಸಹಿ ವರದಿಗಳತ್ತ ಗಮನಹರಿಸಲೇ ಇಲ್ಲ
ಸ್ವಾಮಿ ಅವರ ಸ್ಪಷ್ಟ ನುಡಿಗಳಿವು 'ಕನ್ನಡಪ್ರಭ' ರಾಜ ದಲ್ಲಿ ಪ್ರಕಟವಾದ ಒತ್ತು'ವು' ಲೇಖನಮಾಲೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಎಚ್‌.ಡಿ. ಕುಮಾ ರಸ್ವಾಮಿ, ಈಗಾಗಲೇ ಸಾಕಷ್ಟು ಸಮಯ ವ್ಯರ್ಥ ಆಗಿದೆ. ಎ.ಟಿ. ರಾಮಸ್ವಾಮಿ ಹಾಗೂ
ಸಂದರ್ಶನದ ಸಾರಾಂಶ: ನಾನು ಮುಖ್ಯ ಮಂತ್ರಿಯಾಗಿದ್ದಾಗ ಜಂಟಿ ಸದನ ಸಮಿತಿ ರಚನೆ ಮಾಡುವುದರಿಂದ ಏನೂ ಉಪಯೋ ಗಕ್ಕೆ ಬರುವುದಿಲ್ಲ ಎಂದಿದ್ದರು. ಆದರೂ ಸ್ಪೀಕರ್ ಅವರಿಗೆ ಸದನ ಸಮಿತಿ ರಚನೆ ಮಾಡಿ ಎಂದು ನಾನೇ ಹೇಳಿದೆ. ಎ.ಟಿ. ರಾಮ ಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ಸದನ ಸಮಿತಿಯವರು ಕೊಟ್ಟ ಮಧ್ಯಂತರ ಏಕರೆ ಭೂಮಿ ವಾಪಸ್‌ ಪಡೆದುಕೊಳ್ಳಲು ಒತ್ತುವರಿ ತೆರವು ಮಾಡಲಾಯಿತು, ಸುಳ್ಳು ಅವರು
ಕಾರಣಕ್ಕೂ ರಾಜಿ ಇಲ್ಲ ಎಂದು ಹೇಳಿದ್ದೆ. ಇತರೆ ಸದನ ಸಮಿತಿಗಳಿಂತ ಅತ್ಯಂತ ಪರಿ
ಗಾಮಕಾರಿಯಾಗಿ ಕೆಲಸ ಮಾಡಿದೆ. ಜಂಟಿ
ಒತ್ತುವರಿ
ವಂತೆ ಸದನ ಸಮಿತಿ ಶಿಫಾರಸು ಮಾಡಿತ್ತು ಅದರಂತೆ ಕಾರ್ಯ ನಿರ್ವಹಿಸಿದೆ.
ಕಾಲಮಿತಿ ನಿಗದಿ ಮಾಡಿ: ಕಾಫಿ ಪ್ಲಾಂಟ ವರದಿ ಆಧಾರದ ಮೇಲೆ ಸುಮಾರು 9000 ‌ಗಳು ಸಾಕಷ್ಟು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಭೂಮಿ ಎಂಬುದಕ್ಕೆ ಅವಕಾಶ ಬೇಡ. ತೆರವುಗೊಳಿಸಬೇಕು. ಕಂದಾಯ ಭೂಮಿಯಲ್ಲಿ
• ಸಮಯ ವ್ಯರ್ಥ ಮಾಡದೆ
ಕೈಗೊಳ್ಳಲಿ: ಎಚ್‌ಡಿಕೆ
* ಒತ್ತು'ವರಿ' ಲೇಖನಮಾಲೆ ಬಗ್ಗೆ ವಿಧಾನಸಭೆ ವಿರೋಧ ಪಕ್ಷ ನಾಯಕ ಪ್ರಶಂಸೆ
ರುತ್ತಾರೆ. ಇದರಿಂದ ಪರಿಸರ ಉಳಿಸಿಕೊಂಡು ಭಾಗುತ್ತದೆ. ಅವರನ್ನು ಒಕ್ಕಲೆಬ್ಬಿಸಿ ಅಡಕೆ, ಕಾಫಿ, ಕಡಿಯುವುದು ಸರಿಯಲ್ಲ, ಇದಕ್ಕೊಂದು ಕಾಲ ಮಿತಿ ನಿಗದಿ ಮಾಡಿ, ಸದನಕ್ಕೆ ತರಬೇಕು, ಗಮನ ಕೊಡಲೇ ಇಲ್ಲ, ಮುಂದೆಯೂ ಇಂತಹದ್ದೇ ಸಕ್ರಮ ಆಗುತ್ತದೆ.
ವಣೆ ನಿರ್ಮಾಣ ಮಾಡುವ ಘೋಷಣೆ ಪ್ರತಿಪಕ್ಷ ನಾಯಕ ಎಚ್‌.ಡಿ. ಕುಮಾರ ಯಿತು, ಕಂದಾಯ ಭೂಮಿ ಒತ್ತುವರಿ ಜತೆಗೆ ಯಾರಿಗೂ ತೊಡಲು ಬರುವದಿಲ್ಲ. ಅದನ್ನು ಬಿಡಿಎಗೆ ಸ್ವಾಧೀನವೇ ಬೇಕಿಲ್ಲ: ಮಧ್ಯಮ ಮಾಡಿದೆ. ಇವತ್ತು ನಾವು ಪಿ. ಬಾಲಸುಬ್ರಮ ಬಾಕಿ ಉಳಿದಿರುವ ಬಡಾವಣೆಗಳಲ್ಲಿ ತತಕ್ಷ ನಯನ್ ಹಾಗೂ ಎಟಿ ರಾಮಸ್ವಾಮಿ ವರದಿ ನೋಡಿದರೆ, ಬೆಂಗಳೂರು ಹಾಗೂ ಸುತ್ತಮುತ್ತ
ಹಾಗೂ ಕೆಳ ಮಧ್ಯಮ ವರ್ಗದವರು ಅವರ ಜೀವನವೆಲ್ಲ ದುಡಿದರೂ ಒಂದು ನಿವೇಶನ ದಾಖಲೆ ಸೃಷ್ಟಿಸಿ ಅಮಾಯಕರಿಗೆ ಮಾರಾಟ ಅದಕ್ಕೊಂದು ದರ ನಿಗದಿ ಮಾಡಿ ವರ್ಷಕ್ಕೆ ಖರೀದಿಸಲು ಆಗುವುದಿಲ್ಲ. ಹೀಗಾಗಿ, ಈ ಬಡಾವಣೆ ನಿರ್ಮಿಸಲು ರೈತರ ಭೂಮಿ ಸ್ವಾರ್ಧಿ ಹಾಗೂ ನಗರ ಪ್ರದೇಶಗಳಲ್ಲಿ ಸಾಕಷ್ಟು ಮಾಡಿರುವ ಪ್ರಕರಣಗಳು ಸಾಕಷ್ಟಿವೆ. ಅಂತಹ ಇಷ್ಟು ಎಂದು ಹಣ ಸಂದಾಯ ಮಾಡಿಸಿಕೊಳ್ಳ ಒತ್ತುವರಿ ತೆರವು ಮಾಡಿದ ಭೂಮಿಯಲ್ಲಿ ನಪಡಿಸಿಕೊಳ್ಳುವ ಅಗತ್ಯವೇ ಇಲ್ಲ. ಸರ್ಕಾರಿ ಜಮೀನು ಗುತ್ತಿಗೆ ನೀಡಲಾಗಿದೆ. ಅವುಗಳ ವರ ಮೇಲೆ ಕಠಿಣವಾದ ಕ್ರಮ ಕೈಗೊಳ್ಳು ಬೇಕು. ಅವರು ಅಲ್ಲಿ ಉತ್ತಮವಾದ ಬೆಳೆ ಹಾಕಿ 700-800 ಎಕರೆ ಭೂಮಿಯನ್ನು ಬಿಡಿಎಗೆ ಭೂಮಿ ಒತ್ತುವರಿ ತೆರವುಗೊಳಿಸಿದ ಭೂಮಿ ಮೂಲ ಫೈಲೇ ಕಾಣೆ ಆಗುತ್ತಿವೆ.
ಕೆರೆ-ಕುಂಟೆಗಳ
ಒತ್ತುವರಿ ಮಾಡಿಕೊಂಡಿದ್ದರೆ,
ಯಲ್ಲೇ ವಸತಿ ಕಲ್ಪಿಸಬಹುದು. ಬಿಡಿಎಯಲ್ಲಿ 10 ವರ್ಷ 15 ವರ್ಷ ಬಡಾವ ರಚನೆ ಆಗುತ್ತಿಲ್ಲ. ಇಂದು ಅಗತ್ಯಕ್ಕಿಂತ ಹೆಚ್ಚಿನ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿರುವುದೇ ಡಿನೋಟಿಫೈಗೆ ಕಾರಣವಾಗಿದೆ, ಉದಾಹರಣೆ ಕೆಪೆಗೌಡ ಬಡಾವಣೆಗಾಗಿ ಅಗತ್ಯಕ್ಕಿಂತ ಹೆಚ್ಚಾಗಿ 700- 8 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ನಂತರ ನೋಟಿಫೈ ಮಾಡಲಾಗುತ್ತದೆ. ಸ್ವಾಧೀ ನದ ಬಗ್ಗೆ ಸಂಶಯ ಮೂಡುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು,
ಮಂಜೂರು ಮಾಡಿದ. ಅಲ್ಲಿ ಬಹು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿ ಮನೆಗಳನ್ನು ನೀಡಿ ಎಂದು ಆದೇಶಿಸಿದ್ದೆ, ಆದರೆ ಯಾರೂ ಅತ್ತ
ಬಡಾವಣೆ ನಿರ್ಮಾಣ ಮಾಡಿ, ಬಿಎ ನಿವೇಶನಕ್ಕಾಗಿ ಬಡವರು ಅಥವಾ ನಿವೇಶನ ದಾರರು ಹಣ ಕಟ್ಟಿರುತ್ತಾರೆ. ಬಡಾವಣೆ
ನಿರ್ಮಾಣವಾಗದೆಯೇ ಹಂಚಿಕೆ ಮಾಡು 2007ರಲ್ಲಿ ಬೆಂಗಳೂರಿನಲ್ಲಿ ಐದು ಬಡಾ ತ್ತಾರೆ. ಹೀಗಾಗಿ ಎಲ್ಲ ಸೌಲಭ್ಯ ಮೊದಲೇ ಮಾಡಿ, ನಂತರ ಹಂಚಿಕೆ ಮಾಡಬೇಕು, ಈಗ ಣವೇ ಬಡಾವಣೆ ನಿರ್ಮಾಣ ಮಾಡಿ ನಿವೇ ಶನ ಹಂಚಿಕೆ ಮಾಡಬೇಕು. ಬೆಂಗಳೂರು

ಸರ್ಕಾರಿ ಭೂಮಿ ಒತ್ತು'ವರಿ'- ವಿಧಾನಸಭೆ



ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 24-07-2013

ಸರ್ಕಾರಿ ಭೂಮಿ ಒತ್ತು'ವರಿ'-9


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 23-07-2013

ಸರ್ಕಾರಿ ಭೂಮಿ ಒತ್ತು'ವರಿ'-8 ವಿ. ಬಾಲಸುಬ್ರಮಣಿಯನ್ ಸಂದರ್ಶನ



ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 22-07-2013

ಭೂ ಒತ್ತುವರಿಗೆ ರಾಜಕಾರಣಿಗಳದ್ದೇ ಶ್ರೀರಕ್ಷೆ!

Kere Manjunath ಕೆರೆ ಮಂಜುನಾಥ್

ಬೆಂಗಳೂರು: ರಾಜಕಾರಣಿಗಳು, ಸರ್ಕಾರಿ ನೌಕರರು ಹಾಗೂ ಭೂಮಾಫಿಯಾದವರೇ ರಾಜ್ಯದಲ್ಲಿ ಸರ್ಕಾರಿ ಭೂಮಿ ಒತ್ತುವರಿಗೆ ಪ್ರಮುಖ ಕಾರಣೀಭೂತರು.

ರಾಜಕಾರಣಿಗಳು ಅವರು ಯಾವುದೇ ಪಕ್ಷವಾಗಿರಲಿ ಅವರೇ ಭೂ ಒತ್ತುವರಿಯ ಪ್ರಮುಖ ಪಾತ್ರಧಾರಿಗಳು. ಅವರ ಜತೆಗೆ ಭೂ ಮಾಫಿಯಾ. ಬೆಂಗಳೂರು, ಹುಬ್ಬಳಿ-ಧಾರವಾಡ, ಮೈಸೂರು, ಗುಲ್ಬರ್ಗ, ಮಂಗಳೂರಲ್ಲಿ ಭೂಮಿ ಮೌಲ್ಯ ಬಹಳ ಇದೆ. ಭೂಮಾಫಿಯಾದವರು ರಾಜಕಾರಣಿಗಳಿಂದ ರಕ್ಷಣೆ ಪಡೆಯುತ್ತಾರೆ. ಅಧಿಕಾರಿಗಳಿಂದ ಕೆಲಸ ಮಾಡಿಸುತ್ತಾರೆ. ಅಪಾರ್ಟ್‌ಮೆಂಟ್ ಕಟ್ಟಿಸುತ್ತಾರೆ. ಅದರಲ್ಲಿ ಒಂದೆರಡು ಫ್ಲ್ಯಾಟ್‌ಗಳು ಶಾಸಕರಿಗೇ ಕೊಟ್ಟುಬಿಡುತ್ತಾರೆ...

ಸರ್ಕಾರಿ ಭೂ ಒತ್ತುವರಿ ತೆರವು ಮತ್ತು ಸಂರಕ್ಷಣೆ ಕಾರ್ಯಪಡೆಯ ಮಾಜಿ ಅಧ್ಯಕ್ಷ ವಿ. ಬಾಲಸುಬ್ರಮಣಿಯನ್ ಅವರ ನೇರ ನುಡಿಗಳಿವು. ಸರ್ಕಾರಿ ಭೂ ಒತ್ತುವರಿ ಬಗ್ಗೆ ಕನ್ನಡಪ್ರಭದಲ್ಲಿ ಪ್ರಕಟವಾಗುತ್ತಿರುವ ಒತ್ತು'ವರಿ' ಸರಣಿ ಕೆಲವರ ಕಣ್ಣನ್ನು ತೆರೆಸಿದೆ. ಅದರಂತೆ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕಣ್ಣೂ ತೆರೆಯಬೇಕು ಎಂದು ವಿಶೇಷ ಸಂದರ್ಶನದಲ್ಲಿ ಆಶಿಸಿದ್ದಾರೆ.

ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಮತ್ತೊಂದು ಸದನ ಸಮಿತಿ ಬೇಡ. ಎ.ಟಿ. ರಾಮಸ್ವಾಮಿ ಜಂಟಿ ಸದನ ಸಮಿತಿ ವರದಿ ಅನುಷ್ಠಾನ ಸೇರಿದಂತೆ ರಾಜ್ಯದ ಎಲ್ಲೆಡೆ ಒತ್ತುವರಿ ತೆರವಿಗೆ ಕಾರ್ಯಪಡೆಯನ್ನೇ ರಚಿಸುತ್ತೇವೆ ಎಂದು 2009ರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸದನಕ್ಕೆ ತಿಳಿಸಿದ್ದರು. ಆಗ, ಮುಖ್ಯಕಾರ್ಯದರ್ಶಿ ಕಾರ್ಯಪಡೆ ಅಧ್ಯಕ್ಷರಾಗಬೇಕಿತ್ತು. ಅವರು ಕಾರ್ಯಒತ್ತಡದಿಂದ ಬೇಡ ಎಂದರು. ಜಂಟಿ ಸದನ ಸಮಿತಿಗೆ ಸಲಹೆಗಾರನಾಗಿದ್ದ ನನ್ನನ್ನೇ ಅಧ್ಯಕ್ಷನಾಗು ಎಂದರು. ಸೀರಿಯಸ್ ಆಗಿದ್ದರೆ ಮಾತ್ರ ನಾನು ಒಪ್ಪುತ್ತೇನೆ. ಇಲ್ಲ ಅಂದ್ರೆ ಕಾರ್ಯಪಡೆ ಮಾಡಿ ಉಪಯೋಗವಿಲ್ಲ. ಹಿಂದಿನ ಕಾರ್ಯಪಡೆಗಳಂತೆ ಹಳತಾಗುತ್ತದೆ ಅಷ್ಟೇ ಎಂದೆ. ನನಗೇ ಸರ್ಕಾರಿ ಆದೇಶ ತಯಾರು ಮಾಡಲು ಹೇಳಿದರು. ಅದರಂತೆ ಕಾರ್ಯಪಡೆ ತಯಾರಾಯಿತು. ಆದರೆ, ಒಂದು ಕಡೆ ಕಾರ್ಯಪಡೆ ರಚಿಸಿದ ಸಿಎಂ , ಮತ್ತೊಂದು ಕಡೆ ಅದರ ಕೆಲಸ ನಿಲ್ಲಿಸಿದರು.

ಕಾರ್ಯಪಡೆ 19 ತಿಂಗಳು ಕೆಲಸ ಮಾಡಿತು. ಕಾಲಾವಧಿ ಕೊಟ್ಟಿರಲಿಲ್ಲ. ಸರ್ಕಾರಿ ಭೂಮಿ ಒತ್ತುವರಿ ತೆರವಾಗುವವರೆಗೂ ಕೆಲಸವಿತ್ತು. ಕಾರ್ಯಪಡೆ ಕೆಲಸ ಮಾಡುವಾಗ ಸರ್ಕಾರದ ಅನೇಕ ನ್ಯೂನತೆಗಳು ಕಂಡು ಬಂದವು.  

ಕಂದಾಯ ಇಲಾಖೆ ಕಾರ್ಯದರ್ಶಿಯವರೇ ಅಕ್ರಮವಾಗಿ ಭೂ ವಿನಿಮಯ, ಹರಾಜು ಮಾಡಿದ್ದರು. ಇದೆಲ್ಲವನ್ನೂ ನಮೂದಿಸಿ ವರದಿ ನೀಡುವುದಕ್ಕೆ ಮುನ್ನವೇ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆಗ ಅಂದಿನ ಪ್ರಧಾನ ಕಾರ್ಯದರ್ಶಿ ಮಧು ಕ್ರಮಕ್ಕೆ ಮುಂದಾದರು. ಪ್ರತಿಯೊಂದು ಫೈಲೂ ಕಂದಾಯ ಸಚಿವರಿಗೆ ಹೋಗಬೇಕು. ಆಗ ಕಂದಾಯ ಸಚಿವರಾಗಿದ್ದ ಕರುಣಾಕರ ರೆಡ್ಡಿ 'ಬಹಳ ತೊಂದರೆ ಬರ್ತಾ ಇದೆ' ಅಂತ ಹೇಳಿ ಈ ಕಾರ್ಯಪಡೇನೇ ಬೇಡ ಅಂತ ಹೇಳಿ ಜುಲೈ 4, 2011ರಂದು ತೆಗೆದುಹಾಕಿಬಿಟ್ಟರು. ಇದು ತಪ್ಪು. ರಾಜ್ಯದಲ್ಲಿ ಒಟ್ಟು 17 ಕಾರ್ಯಪಡೆಗಳಿವೆ. ಭೂ ಒತ್ತುವರಿ ತೆರವು ಕಾರ್ಯಪಡೆಯನ್ನು ಮಾತ್ರ ತೆಗೆದುಹಾಕಲಾಯಿತು. ಈ ಬಗ್ಗೆ ಎಲ್ಲರಿಗೂ ಪತ್ರ ಬರೆದಿದ್ದೇವೆ. ಆದರೆ ಏನೂ ಆಗಿಲ್ಲ.

ಕಾರ್ಯಪಡೆ ಕಾಲಾವಧಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಗುರುತಿಸಿದೆವು. ಎಷ್ಟು ಜಮೀನು, ಯಾವ ಜಿಲ್ಲೆ, ತಾಲೂಕು, ಗ್ರಾಮದಲ್ಲಿ ಒತ್ತುವರಿ ಎಷ್ಟು, ಯಾರು ಮಾಡಿದ್ದಾರೆ, ಸರ್ವೆ ನಂಬರ್ ಸಹಿತ ವಿವರ ತಯಾರು ಮಾಡಿದ್ದೇವೆ. ಪ್ರತಿ ಜಿಲ್ಲೆಗೆ ಒಂದರಂತೆ 10 ಸಂಪುಟಗಳ ವರದಿ ನೀಡಿದ್ದೇವೆ. 11 ಲಕ್ಷಕ್ಕೂ ಅಧಿಕ ಎಕರೆ ಭೂ ಒತ್ತುವರಿಯಾಗಿದೆ.

15 ಲಕ್ಷ ಜನರು ಭೂಕಬಳಿಕೆದಾರರು. ಇದು 2011ರ ಜೂನ್ ಅಂತ್ಯದ ಲೆಕ್ಕಾಚಾರ. ಈ ಒತ್ತುವರಿಯ ಮೌಲ್ಯ ಕಾಮನ್ ವೆಲ್ತ್, 2ಜಿ ಸ್ಪೆಕ್ಟ್ರಮ್, ಬಳ್ಳಾರಿ ಗಣಿ ಹಗರಣದ ಮೊತ್ತ ಒಟ್ಟು ಸೇರಿಸಿದರೂ ಸರಿ ಹೊಂದುವುದಿಲ್ಲ. ಈಗ ಸರ್ವೆ ಮಾಡಿದರೆ ನಮ್ಮ ವರದಿಗಿಂತ ದುಪ್ಪಟ್ಟು, ಮೂರು ಪಟ್ಟು ಹೆಚ್ಚು ಒತ್ತುವರಿ ಬಹಿರಂಗವಾಗಬಹುದು.

ಕಾಫಿ ತೋಟಗಳಲ್ಲೇ ಅತಿ ಹೆಚ್ಚು: ಅರಣ್ಯ ಒತ್ತುವರಿಯಲ್ಲಿ ಪ್ರಮುಖವಾಗಿರುವುದು ಪಶ್ಚಿಮ ಘಟ್ಟ. ಚಿಕ್ಕಮಗಳೂರು, ಕಾರವಾರ, ಶಿವಮೊಗ್ಗ, ಕೊಡಗು, ಹಾಸನ ಐದಾರು ಜಿಲ್ಲೆಗಳಲ್ಲಿನ ಕಾಫಿ ತೋಟಗಳಲ್ಲೇ ಅತಿ ಹೆಚ್ಚು. ಕೊಪ್ಪದಲ್ಲಿ ದೊಡ್ಡ ಕಾಫಿ ತೋಟ ಮಾಡಿರುವವರು 10-20ರಿಂದ 200 ಎಕರೆವರೆಗೂ ಒತ್ತುವರಿ ಮಾಡಿದ್ದಾರೆ.

ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. 15 ದಿನ ಅವಧಿಯಿರುವ ನೋಟಿಸ್‌ನ ನಂತರವೂ ಉತ್ತರ ಬಂದಿಲ್ಲ, ಅಂತಿಮ ಆದೇಶವೂ ಆಗಿಲ್ಲ. ಜಿಲ್ಲಾಧಿಕಾರಿ ಎಲ್ಲರಿಗೂ ನೋಟೀಸ್ ನೀಡಿದಾಗ 2010ರಲ್ಲಿ ಸಂಸದರಾಗಿದ್ದ ಸದಾನಂದಗೌಡ, ಕಾಫಿ ತೋಟದವರೊಂದಿಗೆ ಬಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಅರ್ಧ, ಒಂದು ಎಕರೆ ಒತ್ತುವರಿ ಮಾಡಿಕೊಂಡವರಿಗೂ ನೋಟೀಸ್ ನೀಡಿ, ಬಹಳ ತೊಂದರೆ ಕೊಡುತ್ತಿದ್ದಾರೆ ಎಂದಿದ್ದರು. ಅರ್ಧ, ಒಂದು ಎಕರೆಯಲ್ಲಿ ಯಾರೂ ಕಾಫಿ ತೋಟ ಮಾಡುವುದಿಲ್ಲ. ಅಂತಹವರ ಹೆಸರು ಹೇಳಿಕೊಂಡ ಬಂದವರೊಂದಿಗೆ ಬಂದ ಸದಾನಂದಗೌಡ, ಮುಖ್ಯಮಂತ್ರಿ ಮೇಲೆ ಪ್ರಭಾವ ಬೀರಿ ಜಿಲ್ಲಾಧಿಕಾರಿಯವರು ಶಾಶ್ವತ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂಬ ಸೂಚನೆ ನೀಡಿಸಿದರು.

ಇದೇ ಕಾನೂನುಬಾಹಿರ. ಸರ್ಕಾರಿ ಭೂ ಒತ್ತುವರಿ ಬಗ್ಗೆ ಜಿಲ್ಲಾಧಿಕಾರಿ ಅಥವಾ ಅರಣ್ಯಾಧಿಕಾರಿ ನೋಟಿಸ್ ನೀಡಿದ ಮೇಲೆ ಅದನ್ನು ನ್ಯಾಯಾಲಯ ಮಾತ್ರ ತಡೆಯಬಹುದು. ಇದೇ ಮಾನದಂಡವಾಗಿ ಇಡೀ ರಾಜ್ಯದಲ್ಲಿ ಒತ್ತುವರಿ ತೆರವು ನಿಂತುಹೋಯಿತು.

ಅವರಿಂದ ಅಕ್ರಮ, ಇಲ್ಲೇ ಬಂದು ಮಾತನಾಡಲಿ!

ಸರ್ವೆಗೆ ಹೋಗಿದ್ದಾಗ ರಮೇಶ್‌ಕುಮಾರ್ ಎಲ್ಲಿ ಎಂದೆ. ಅವರು ಒಳಗೆ ಕೂತುಕೊಂಡಿದ್ದರು. ಸುಮಾರು 20 ಜನ ಅಧಿಕಾರಿಗಳು ಹೋಗಿದ್ದೆವು. ಅವರು ನಿಮ್ಮನ್ನೇ ಒಳಗೆ ಕರೀತಿದ್ದಾರೆ ಎಂದರು. ಕಾನೂನು ಮುರಿದವರು ಅವರು. ಅವರೇನಾದರೂ ಹೇಳೋದು ಇದ್ರೆ ಅವರು ನಮ್ಮ ಮುಂದೆ ಬಂದು ಹೇಳಬೇಕು. ನಾವು ಒಳಗೆ ಹೋಗಿ ಅವರ ಹತ್ತಿರ ಮಾತನಾಡುವುದಿಲ್ಲ ಎಂದಿದ್ದೆ. 60 ಎಕರೆ ಅರಣ್ಯ ಭೂಮಿ ಒತ್ತುವರಿ ಬಗ್ಗೆ ಅರಣ್ಯ ಇಲಾಖೆ ಸಾಕಷ್ಟು ನೋಟಿಸ್ ಕೊಟ್ಟಿತ್ತು. ಏನೂ ಆಗಿರಲಿಲ್ಲ. ಕೋಲಾರಕ್ಕೆ ಒಳ್ಳೆ ಡಿಸಿಎಫ್ ಬಂದರು. ರತನ್‌ಕುಮಾರ್ ಎಂಬ ಉತ್ತರ ಭಾರತ ಮೂಲದ ಅಧಿಕಾರಿ. ಒತ್ತುವರಿಯನ್ನು ಗಂಭೀರವಾಗಿ ತೆಗೆದುಕೊಂಡರು. ಇದನ್ನು ತೆರವುಗೊಳಿಸಿ ಎಂದು ನೋಟಿಸ್ ನೀಡಿದರು. ಅಪೀಲ್ ಹೋದರು. ರಾಜಕೀಯದ ಪ್ರಭಾವದಿಂದ ಎರಡು ವರ್ಷ ವಿಚಾರಣೆ ನಡೆಯದಂತೆ ನೋಡಿಕೊಂಡರು. ಪ್ರಾಂತೀಯ ಆಯುಕ್ತರ ಒಂದು ಮೀಟಿಂಗ್‌ನಲ್ಲಿ ಡಿಸಿಎಫ್ ರತನ್‌ಕುಮಾರ್ 'ದೊಡ್ಡದೊಡ್ಡವರು ಇದ್ದಾರೆ. ನಾವು ತೆರವು ಮಾಡಲು ಆಗುತ್ತಿಲ್ಲ. ಜಂಟಿ ಸರ್ವೆ ಮಾಡಬೇಕು. ಅದಕ್ಕೆ ಬಿಡುತ್ತಿಲ್ಲ. ನೀವೇ ಬನ್ನಿ' ಎಂದರು. ಆಗ ಅಲ್ಲಿಗೆ ಹೋಗಿ ಪರಿಶೀಲನೆ ಮಾಡಿದ್ದೆವು. ಪೊಲೀಸರ ಸಹಾಯ ಪಡೆದುಕೊಂಡು ಗೇಟ್ ತೆರೆದು ಒಳಗೆ ಹೋದೆವು. ಕಂದಾಯ-ಅರಣ್ಯ ಇಲಾಖೆ ಪ್ರಕ್ರಿಯೆಯಂತೆ ಜಂಟಿ ಸರ್ವೆ ಆಯಿತು. ಅರಣ್ಯ ಭೂಮಿ ಇದೆ ಎಂಬುದು ಆಗಲೂ ಗೊತ್ತಾಯಿತು. ಆ ಒಳ್ಳೆ ಡಿಸಿಎಫ್ ವರ್ಗಾಯಿಸಿಬಿಟ್ಟರು. ಬೇರೆ ಯಾರೋ ಬಂದಿದ್ದಾರೆ. ಅವರೇನು ಕೆಲಸ ಮಾಡುತ್ತಿಲ್ಲ. ಈಗ ಸಿದ್ದರಾಮಯ್ಯ ಬಂದ ಮೇಲೆ ಏನು ಮಾಡುತ್ತಾರೆ ನೋಡಬೇಕು. ರಮೇಶ್‌ಕುಮಾರ್ ಕಾಂಗ್ರೆಸ್ ಎಂಎಲ್‌ಎ ಬೇರೆ. ರಮೇಶ್‌ಕುಮಾರ್ ಒಂದು ಸಲ ಆಫೀಸ್‌ಗೆ ಬಂದಿದ್ರು. ನಾನು ಸುಮಾರು 20 ಜನ ಅಧಿಕಾರಿಗಳೊಂದಿಗೆ ಮೀಟಿಂಗ್ ಮಾಡುತ್ತಿದ್ದೆ. ಈ ಮೀಟಿಂಗ್ ಮಧ್ಯಾಹ್ನ 3 ಗಂಟೆವರೆಗೂ ಆಗುತ್ತದೆ. ಈಗ ಬಂದರೆ ಹೇಗೆ? ಅಪಾಯಿಂಟ್‌ಮೆಂಟ್ ತೆಗೆದುಕೊಂಡು ಬರಲಿ ಎಂದು ಹೇಳಿದ್ದೆ ಅಷ್ಟೇ. ಆಮೇಲೆ ಹೋದವರು ನಂತರ ಬರಲೇ ಇಲ್ಲ. ನಿಜವಾಗಿ ಆದದ್ದು ಇಷ್ಟೇ.

ಶಾಶ್ವತ ಸಮಿತಿ ಇರಲಿ

ಸರ್ಕಾರಿ ಭೂಮಿ ಉಳಿಸಿಕೊಳ್ಳುವ ಉದ್ದೇಶವಿದ್ದರೆ ವಿಧಾನಮಂಡಲದಲ್ಲಿರುವ ಲೆಕ್ಕಪತ್ರ ಸಮಿತಿಯಂತೆ ಶಾಶ್ವತ ಸಮಿತಿ ರಚಿಸಬೇಕು. ಎಲ್ಲ ಪಕ್ಷದವರೂ ಸಮಿತಿಯಲ್ಲಿ ಇರುವುದರಿಂದ ಒಂದು ರೀತಿ ನ್ಯಾಯ ಸಿಗುತ್ತದೆ. ಆದರೆ, ರಮೇಶ್‌ಕುಮಾರ್ ಅವರಂತಹವರೇ ಸದಸ್ಯರಾದರೆ ಏನೂ ಆಗುವುದಿಲ್ಲ. ಇದೆಲ್ಲಕ್ಕಿಂತ ಮೊದಲು ಮುಖ್ಯಮಂತ್ರಿ ಅವರು ಜಿಲ್ಲಾಧಿಕಾರಿ ಅವರಿಗಿರುವ ತಡೆ ಆದೇಶ ತೆರವುಗೊಳಿಸಬೇಕು. ಎಲ್ಲ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು.

ಮ್ಯಾನೇಜ್ ಮಾಡ್ತಾರೆ?

ಕೋಲಾರದ ಶ್ರೀನಿವಾಸಪುರದಲ್ಲಿ ಅರಣ್ಯ ಭೂಮಿ ಒತ್ತುವರಿ ಪರಿಶೀಲನೆಗೆ ಹೋಗುವ ದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗಿದ್ದ ಹತ್ತಾರು ಅಡ್ವೈಸರ್‌ಗಳಲ್ಲಿ ಒಬ್ಬರಾಗಿ ಕಾನೂನು ಸಲಹೆಗಾರ ದಿವಾಕರ್ ನನಗೆ ಫೋನ್ ಮಾಡಿದ್ದರು. 'ಸಾರ್ ತಾವೆಲ್ಲ ಯಾಕೆ ಹೋಗಬೇಕು. ನೀವೆಲ್ಲ ಅತ್ಯಂತ ಸೀನಿಯರ್ ಆಫೀಸರ್ಸ್ ಹೋಗೋದು ಬೇಡ. ಲೋಕಲ್ ಆಫೀಸರ್‌ಗಳೇ ಮ್ಯಾನೇಜ್ ಮಾಡುತ್ತಾರೆ' ಎಂದರು. ನೋಡ್ರಿ, ಲೋಕಲ್ ಆಫೀಸ್‌ನಲ್ಲಿ ಏನೂ ಆಗುತ್ತಿಲ್ಲ ಅಂತಾನೇ ನಾವು ಹೋಗುತ್ತಿರುವುದು ಎಂದೆ. 'ಅದಲ್ಲ ಸಾರ್, ಲಾ ಆ್ಯಂಡ್ ಆರ್ಡರ್ ಪ್ರಾಬ್ಲಂ ಆಗಬಹುದೇನೋ?' ಎಂದರು. ನನ್ನ ಜತೆ ಜಿಲ್ಲಾಧಿಕಾರಿ ಇದ್ದಾರೆ, ಎಸ್ಪಿ ಇದ್ದಾರೆ. ಏನಾದ್ರೂ ಆದರೆ ನೋಡಿಕೊಳ್ಳುತ್ತಾರೆ ಬಿಡಿ ಎಂದೆ.

ಯಾರ್ಯಾರಿಗೋ ಜಮೀನು

ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿರುವವರಿಗೆ ಅಥವಾ ಭೂಮಿ ಇಲ್ಲದವರಿಗೆ ಸಕ್ರಮದಲ್ಲಿ ಭೂಮಿ ನೀಡಲಾಗುತ್ತದೆ. ಅಂದು ಶಾಸಕರಾಗಿದ್ದ ಜೀವರಾಜ್ ಚಿಕ್ಕಮಗಳೂರಿನಲ್ಲಿ ಈ ಸಮಿತಿ ಅಧ್ಯಕ್ಷರಾಗಿದ್ದರು. ಅವರ ಅಧ್ಯಕ್ಷತೆಯ ಸಮಿತಿಯಲ್ಲಿ ಯಾರ್ಯಾರಿಗೋ ಭೂಮಿ ಕೊಟ್ಟಿದ್ದಾರೆ. ಪರಿಶಿಷ್ಟರ ಹೆಸರಿನಲ್ಲಿ ಗೌಡರು, ಲಿಂಗಾಯತರಿಗೆಲ್ಲ ಕೊಟ್ಟಿದ್ದಾರೆ. ಇಂತಹ 122 ಪ್ರಕರಣಗಳಿವೆ. ಲೋಕಾಯುಕ್ತರೂ ಇದರ ಬಗ್ಗೆ ಕಾರ್ಯಪಡೆಯಿಂದ ವರದಿ ಕೇಳಿದ್ದರು. ನಾವು ನೀಡಿದ್ದೆವು. ಹಾಸನದ ಹೊಳೆನರಸೀಪುರದಲ್ಲಿ ಎಚ್.ಡಿ. ರೇವಣ್ಣ ಅವರೂ ಇದೇ ರೀತಿ ಮಾಡಿದ್ದಾರೆ.

ಸರ್ಕಾರಿ ಭೂಮಿ ಒತ್ತು'ವರಿ'-7


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 21-07-2013

ಸರ್ಕಾರಿ ಭೂಮಿ ಒತ್ತು'ವರಿ'-6


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 20-07-2013

Friday, July 19, 2013

ಸರ್ಕಾರಿ ಭೂಮಿ ಒತ್ತು'ವರಿ'-5


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 19-07-2013

ಸರ್ಕಾರಿ ಭೂಮಿ ಒತ್ತು'ವರಿ'-4

 
ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 18 -07-2013

ಸರ್ಕಾರಿ ಭೂಮಿ ಒತ್ತು'ವರಿ'-3


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ:17 -07-2013

ಸರ್ಕಾರಿ ಭೂಮಿ ಒತ್ತು'ವರಿ'-2


ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 16 -07-2013

ಸರ್ಕಾರಿ ಭೂಮಿ ಒತ್ತು'ವರಿ'-1



ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 15 -07-2013

ವಿಧಾನಸೌಧ ಕೊಳೆಮನೆ



 
ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ:15 -07-2013

Wednesday, July 10, 2013

ಅನ್ನಭಾಗ್ಯ 2013: Annabhagya for the poor from today



ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ:   10-07-2013

Annabhagya for the poor from today


Kere Manjunath ಕೆರೆ ಮಂಜುನಾಥ್‌

 Annabhagya for 5.7 crore people of the state from Wednesday... that means 93% people of the state will be eligible for the 'Annabhagya' scheme facility.

 5.7 crore people of the state will get food from Wednesday...
 That means 93% people of the state will be eligible for 'Annabhagya' scheme facility. As proposed by the Congress in its assembly election manifesto, the scheme of giving one kg of rice for one rupee will be officially launched on Wednesday. Siddaramaiah had announced the cheap rice scheme on the day he assumed office as Chief Minister. The project, which was supposed to start from June itself, is getting delayed by a month.
 Chief Minister Siddaramaiah will launch Annabhagya Yojana at Independence Park in Bengaluru on Wednesday. The scheme will be implemented from Wednesday in all parts of the state, and the respective fair price shops will be able to buy a kg of rice for Rs 1 from the time when rice is distributed.
 Antyodaya, below poverty line cardholders are the beneficiaries of Annabhagya Yojana. If there is one member, they will get 10 kg, if there are 2 members, 20 kg and if there are more than two members, they will get 30 kg of rice every month. Antyodaya card does not have member count. 35 kg of rice is given to that card every month. BPL, Antyodaya has a total of 98,35,701 cards and can buy rice under the scheme through 20,459 fair price shops.

Fully Geared: 

The Department of Food and Civil Supplies is fully geared up to distribute rice under the Annabhagya scheme. The district and taluk level officials have already been instructed to procure the rice required for this. Almost everyone has got rice. However, even in the 20459 fair price shops in the state, there is no guarantee that one rupee worth of rice will be available from Wednesday itself. Because in the existing system, one fair price shop distributes rice one day at a time. Hence monthly ration will be distributed from 10th to 30th. The cheap rice scheme was supposed to start from June itself. If the project had started then, the state government would have had to face the problem of rice shortage and procurement. Now, by implementing the scheme, management is being done without buying rice from outside. The rice in government stock, including 20 thousand metric tonnes of additional rice provided by the central government, will meet the requirement of 2.78 metric tonnes of rice for the month of July. Thus, there is no concept of purchase for Annabhagya Yojana in the month of July.

Purchase of Rice: 

In the month of August, purchase of rice will be necessary. For this, the government has already initiated the process of purchase from Chhattisgarh and the only thing that is pending is the signing of the agreement. Besides, it has also decided to purchase rice at competitive rates through tender. Moreover, the state government is also expected to receive more rice from the central government's food security notification. The state government has implemented the Annabhagya Yojana with an additional burden of around 4500 crores. Out of the required 2.78 metric tonnes of rice, the central government is providing 1.77 metric tonnes of rice. An additional 20 thousand metric tons of rice has been given this month. So this time there are indications that rice will be distributed without any kind of problem. However, the Annabhagya scheme will not be complete without the purchase of rice from August.

District wise details of Antyodaya and BPL cards

 District Antyodaya Bpl
 Bagalkot 46,673 2,64,180
 Bangalore City 30,116 6,91,411
 Bangalore Gr. 14,659 1,74,793
 Belgaum 83,361 6,48,853
 Bellary 63,912 3,03,517
 Bidar 40,811 2,45,534
 Bijapur 46,880 2,96,453
 Chamarajanagar 35,820 2,03,059
 Chikmagalur 22,922 1,99,140
 Chitradurga 43,574 2,98,022
 Chikkaballapur 28,775 2,39,584
 Dakshina Kannada 21,350 1,58,457
 Davangere 50,885 3,33,830
 Dharwad 30,407 2,78,816
 Gadag 29,553 1,72,797
 Gulbarga 63,717 4,04,599
 Hassan 23,795 3,63,412
 Haveri 47,882 2,61,407
 Kodagu 9,672 68,719
 Kolar 30,305 2,68,061
 Koppal 38,256 2,04,131
 Mandya 35,108 3,74,364
 Mysore 51,097 5,47,736
 Raichur 54,342 2,45,190
 Ramanagara 19,056 2,15,318
 Shimoga 38,717 2,69,569
 Tumkur 50,286 4,77,783
 Udupi 18,513 95,904
 Uttara Kannada 16,321 2,18,381
 Yadagiri 30,009 1,66,126

 There is no shortage of rice for Annabhagya Yojana. This scheme will start simultaneously in all the district centers of the state from July 10. I will officially launch the project at Independence Park in Bangalore.
 - Siddaramaiah, Chief Minister

 Rice is available in almost all fair price shops. However, in the existing system, one fair price shop distributes rice one day at a time. So, no one needs to worry. One kg of rice is available for one rupee from the July ration itself. This project is continuous.
 - Dinesh Gundurao, Minister of State for Food and Civil Supplies

Increased population

 Statistics prove that there are lakhs of bogus BPL cards in the state. The number of Antyodaya and BPL cards in the state is 98,35,701. The number of Above Poverty Line (APL) cards is 35,26,773. Annabhagya Yojana estimates that 5.7 crore people are beneficiaries. This does not include those on APL cards. According to the 2011 census, there are 6.11 crore people in the state. There are 5.7 crore people under BPL and Antyodaya. Are the people above that only 41 lakhs? There is no clear answer to this question. Genuine beneficiaries are eligible for 'Annabhagya' only when fake or bogus BPL cards are cancelled.

 Total BPL Cards:  87,00,740
 Cards with only one member:  3,60,200
 Cards with two members:  8,30,742
 A card with more than two members:  75,09,798
 Antyodaya cards:  11,34,96
10 kg rice per month per member 
card per month for two cards:  20 kg of rice
For a card higher than two:  30 kg of rice
To Antyodaya card:  35 kg of rice

Total beneficiaries are 5.7 crores
Rice required is 2,78,428 MT
4500 crore additional burden on the state government
Total Fair Price Shops 20,459

ಬಡವರಿಗೆ ಇಂದಿನಿಂದ ಅನ್ನಭಾಗ್ಯ

ರಾಜ್ಯದ 5.7 ಕೋಟಿ ಜನರಿಗೆ ಬುಧವಾರದಿಂದ ಅನ್ನಭಾಗ್ಯ... ಅಂದರೆ ರಾಜ್ಯದ ಶೇ.93ರಷ್ಟು ಜನರು 'ಅನ್ನಭಾಗ್ಯ' ಯೋಜನೆ ಸೌಲಭ್ಯಕ್ಕೆ ಪಾತ್ರರಾಗಲಿದ್ದಾರೆ.
ರಾಜ್ಯದ 5.7 ಕೋಟಿ ಜನರಿಗೆ ಬುಧವಾರದಿಂದ ಅನ್ನಭಾಗ್ಯ...
ಅಂದರೆ ರಾಜ್ಯದ ಶೇ.93ರಷ್ಟು ಜನರು 'ಅನ್ನಭಾಗ್ಯ' ಯೋಜನೆ ಸೌಲಭ್ಯಕ್ಕೆ ಪಾತ್ರರಾಗಲಿದ್ದಾರೆ. ಕಾಂಗ್ರೆಸ್ ತನ್ನ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದಂತೆ ಒಂದು ರುಪಾಯಿಗೆ ಒಂದು ಕೆಜಿ ಅಕ್ಕಿ ನೀಡುವ ಯೋಜನೆಗೆ ಬುಧವಾರ ಅಧಿಕೃತ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಸಿದ್ದರಾಮಯ್ಯ ಅವರು ಅಗ್ಗದ ಅಕ್ಕಿ ಯೋಜನೆ ಪ್ರಕಟಿಸಿದ್ದರು. ಜೂನ್‌ನಿಂದಲೇ ಆರಂಭವಾಗಬೇಕಿದ್ದ ಈ ಯೋಜನೆ ಒಂದು ತಿಂಗಳ ತಡವಾಗಿ ಪ್ರಾರಂಭವಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನ್ನಭಾಗ್ಯ ಯೋಜನೆಗೆ ಬುಧವಾರ ಚಾಲನೆ ನೀಡಲಿದ್ದಾರೆ. ರಾಜ್ಯದೆಲ್ಲೆಡೆಯೂ ಬುಧವಾರದಿಂದಲೇ ಯೋಜನೆ ಜಾರಿಗೆ ಬರಲಿದ್ದು, ಆಯಾ ನ್ಯಾಯಬೆಲೆ ಅಂಗಡಿಗಳು ಯಾವ ಕಾಲದಲ್ಲಿ ಅಕ್ಕಿ ವಿತರಿಸಲಾಗುತ್ತದೋ ಅಂದಿನಿಂದಲೇ 1ರು.ಗೆ ಒಂದು ಕೆಜಿ ಅಕ್ಕಿ ಖರೀದಿಸಬಹುದು.
ಅಂತ್ಯೋದಯ, ಬಡತನ ರೇಖೆಯಿಂದ ಕೆಳಗಿರುವ ಕಾರ್ಡ್‌ದಾರರು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು. ಒಬ್ಬ ಸದಸ್ಯರಿದ್ದರೆ 10 ಕೆಜಿ, 2 ಸದಸ್ಯರಿದ್ದರೆ 20 ಕೆಜಿ ಹಾಗೂ ಇಬ್ಬರಿಗಿಂತ ಹೆಚ್ಚಿನ ಸದಸ್ಯರಿದ್ದರೆ ಪ್ರತಿ ತಿಂಗಳು 30 ಕೆಜಿ ಅಕ್ಕಿ ಪಡೆಯಲಿದ್ದಾರೆ. ಅಂತ್ಯೋದಯ ಕಾರ್ಡ್‌ನಲ್ಲಿ ಸದಸ್ಯರ ಲೆಕ್ಕಾಚಾರ ಇಲ್ಲ. ಆ ಕಾರ್ಡ್‌ಗೆ ಪ್ರತಿ ತಿಂಗಳು 35 ಕೆಜಿ ಅಕ್ಕಿ ನೀಡಲಾಗುತ್ತದೆ. ಬಿಪಿಎಲ್, ಅಂತ್ಯೋದಯದಲ್ಲಿ ಒಟ್ಟು 98,35,701 ಕಾರ್ಡ್‌ಗಳಿದ್ದು, 20,459 ನ್ಯಾಯಬೆಲೆ ಅಂಗಡಿಗಳ ಮೂಲಕ ಯೋಜನೆಯಡಿ ಅಕ್ಕಿ ಖರೀದಿಸಬಹುದು.
    
ಸಂಪೂರ್ಣ ಸಜ್ಜು: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಂಪೂರ್ಣ ಸಜ್ಜಾಗಿದೆ. ಇದಕ್ಕೆ ಅಗತ್ಯವಿರುವ ಅಕ್ಕಿಯನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪಡೆದುಕೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಬಹುತೇಕ ಎಲ್ಲರೂ ಅಕ್ಕಿಯನ್ನು ಪಡೆದುಕೊಂಡಿದ್ದಾರೆ. ಹೀಗಿದ್ದರೂ ರಾಜ್ಯದಲ್ಲಿರುವ 20459 ನ್ಯಾಯಬೆಲೆ ಅಂಗಡಿಗಳಲ್ಲೂ ಬುಧವಾರದಿಂದಲೇ ಒಂದು ರುಪಾಯಿ ಅಕ್ಕಿ ಸಿಗುತ್ತದೆ ಎಂಬ ಖಾತರಿ ಇಲ್ಲ. ಏಕೆಂದರೆ ಈವರೆಗೂ ಇರುವ ವ್ಯವಸ್ಥೆಯಲ್ಲಿ ಒಂದೊಂದು ನ್ಯಾಯಬೆಲೆ ಅಂಗಡಿಯವರು ಒಂದೊಂದು ದಿನ ಅಕ್ಕಿ ವಿತರಿಸುತ್ತಾರೆ. ಹೀಗಾಗಿ 10ನೇ ತಾರೀಖಿನಿಂದ ಹಿಡಿದು 30ರವರೆಗೂ ತಿಂಗಳ ಪಡಿತರ ವಿತರಣೆಯಾಗುತ್ತದೆ. ಅಗ್ಗದ ಅಕ್ಕಿ ಯೋಜನೆ ಜೂನ್‌ನಿಂದಲೇ ಪ್ರಾರಂಭವಾಗಬೇಕಿತ್ತು. ಆಗ ಯೋಜನೆ ಪ್ರಾರಂಭವಾಗಿದ್ದರೆ ಅಕ್ಕಿ ಕೊರತೆ ಹಾಗೂ ಖರೀದಿ ಸಮಸ್ಯೆಯನ್ನು ರಾಜ್ಯ ಸರ್ಕಾರ ಎದುರಿಸಬೇಕಾಗಿತ್ತು. ಈಗ ಯೋಜನೆ ಜಾರಿ ಮಾಡುವ ಮೂಲಕ ಹೊರಗಡೆಯಿಂದ ಅಕ್ಕಿ ಖರೀದಿ ಮಾಡದೆಯೇ ನಿರ್ವಹಣೆ ಮಾಡುತ್ತಿದೆ. ಸರ್ಕಾರದ ದಾಸ್ತಾನಿನಲ್ಲಿರುವ ಅಕ್ಕಿ, ಕೇಂದ್ರ ಸರ್ಕಾರ ನೀಡಿರುವ 20 ಸಾವಿರ ಮೆಟ್ರಿಕ್ ಟನ್ ಹೆಚ್ಚುವರಿ ಅಕ್ಕಿ ಸೇರಿದಂತೆ ಜುಲೈ ತಿಂಗಳಿಗೆ ಅಗತ್ಯ ವಿರುವ 2.78 ಮೆಟ್ರಿಕ್ ಟನ್ ಅಕ್ಕಿ ಸರಿಯಾಗುತ್ತದೆ. ಹೀಗಾಗಿ, ಜುಲೈ ತಿಂಗಳಲ್ಲಿ ಅನ್ನಭಾಗ್ಯ ಯೋಜನೆಗೆ ಖರೀದಿಸುವ ಪ್ರಮೇಯವೇ ಇಲ್ಲ.

ಅಕ್ಕಿ ಖರೀದಿ: ಆಗಸ್ಟ್ ತಿಂಗಳಿನಲ್ಲಿ ಅಕ್ಕಿ ನೀಡುವ ಸಂದರ್ಭಕ್ಕೆ ಖರೀದಿ ಅಗತ್ಯವಾಗುತ್ತದೆ. ಇದಕ್ಕಾಗಿ ಛತ್ತೀಸ್‌ಗಢದಿಂದ ಖರೀದಿಸುವ ಪ್ರಕ್ರಿಯೆಗೆ ಸರ್ಕಾರ ಈಗಾಗಲೇ ಚಾಲನೆ ನೀಡಿದ್ದು, ಒಪ್ಪಂದಕ್ಕೆ ಸಹಿ ಹಾಕುವುದಷ್ಟೇ ಬಾಕಿ ಉಳಿದಿದೆ. ಇದಲ್ಲದೆ, ಟೆಂಡರ್ ಮೂಲಕವೂ ಸ್ಪರ್ಧಾತ್ಮಕ ದರದಲ್ಲಿ ಅಕ್ಕಿ ಖರೀದಿಸಲು ನಿರ್ಧರಿಸಿದೆ. ಇದಲ್ಲದೆ, ಕೇಂದ್ರ ಸರ್ಕಾರದ ಆಹಾರ ಭದ್ರತೆ ಅಧಿಸೂಚನೆಯಿಂದಲೂ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅಕ್ಕಿ ಬರುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರ ಸುಮಾರು 4500 ಕೋಟಿ ಹೆಚ್ಚುವರಿ ಹೊರೆ ಹಾಕಿಕೊಂಡು ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆ. ಅಗತ್ಯವಿರುವ 2.78 ಮೆಟ್ರಿಕ್ ಟನ್ ಅಕ್ಕಿಯಲ್ಲಿ ಕೇಂದ್ರ ಸರ್ಕಾರ 1.77 ಮೆಟ್ರಿಕ್ ಟನ್ ಅಕ್ಕಿ ನೀಡುತ್ತಿದೆ. ಈ ತಿಂಗಳು ಹೆಚ್ಚುವರಿಯಾಗಿ 20 ಸಾವಿರ ಮೆಟ್ರಿಕ್ ಟನ್ ಅಕ್ಕಿ ನೀಡಿದೆ. ಹೀಗಾಗಿ ಈ ಬಾರಿ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಅಕ್ಕಿ ವಿತರಣೆಯಾಗುವ ಲಕ್ಷಣಗಳಿವೆ. ಆದರೆ, ಆಗಸ್ಟ್‌ನಿಂದ ಅಕ್ಕಿ ಖರೀದಿಯಾಗದೆ ಅನ್ನಭಾಗ್ಯ ಯೋಜನೆ ಸಂಪೂರ್ಣಗೊಳ್ಳುವುದಿಲ್ಲ.

ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ಗಳ ಜಿಲ್ಲಾವಾರು ವಿವರ
ಜಿಲ್ಲೆ     ಅಂತ್ಯೋದಯ    ಬಿಪಿಎಲ್
ಬಾಗಲಕೋಟೆ     46,673    2,64,180
ಬೆಂಗಳೂರು ನಗರ    30,116    6,91,411
ಬೆಂಗಳೂರು ಗ್ರಾ.     14,659    1,74,793
ಬೆಳಗಾವಿ    83,361     6,48,853
ಬಳ್ಳಾರಿ     63,912     3,03,517
ಬೀದರ್    40,811    2,45,534
ಬಿಜಾಪುರ      46,880    2,96,453
ಚಾಮರಾಜನಗರ      35,820    2,03,059
ಚಿಕ್ಕಮಗಳೂರು     22,922     1,99,140
ಚಿತ್ರದುರ್ಗ     43,574    2,98,022
ಚಿಕ್ಕಬಳ್ಳಾಪುರ    28,775    2,39,584
ದಕ್ಷಿಣ ಕನ್ನಡ     21,350    1,58,457
ದಾವಣಗೆರೆ      50,885    3,33,830
ಧಾರವಾಡ      30,407    2,78,816
ಗದಗ      29,553    1,72,797
ಗುಲ್ಬರ್ಗಾ    63,717      4,04,599
ಹಾಸನ     23,795     3,63,412
ಹಾವೇರಿ    47,882     2,61,407
ಕೊಡಗು     9,672    68,719
ಕೋಲಾರ     30,305     2,68,061
ಕೊಪ್ಪಳ     38,256     2,04,131
ಮಂಡ್ಯ    35,108    3,74,364
ಮೈಸೂರು     51,097     5,47,736
ರಾಯಚೂರು     54,342    2,45,190
ರಾಮನಗರ     19,056     2,15,318
ಶಿವಮೊಗ್ಗ     38,717    2,69,569
ತುಮಕೂರು    50,286    4,77,783
ಉಡುಪಿ    18,513    95,904
ಉತ್ತರ ಕನ್ನಡ     16,321     2,18,381
ಯಾದಗಿರಿ     30,009    1,66,126

ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊರತೆ ಇಲ್ಲ. ಜುಲೈ 10ರಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಈ ಯೋಜನೆ ಆರಂಭಗೊಳ್ಳುತ್ತದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಯೋಜನೆಗೆ ನಾನು ಅಧಿಕೃತ ಚಾಲನೆ ನೀಡಲಿದ್ದೇನೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಬಹುತೇಕ ಎಲ್ಲ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಲಭ್ಯ. ಆದರೆ, ಈವರೆಗೂ ಇರುವ ವ್ಯವಸ್ಥೆಯಲ್ಲಿ ಒಂದೊಂದು ನ್ಯಾಯಬೆಲೆ ಅಂಗಡಿಯವರು ಒಂದೊಂದು ದಿನ ಅಕ್ಕಿ ವಿತರಿಸುತ್ತಾರೆ. ಹೀಗಾಗಿ, ಯಾರೂ ಆತಂಕ ಪಡಬೇಕಿಲ್ಲ. ಜುಲೈ ತಿಂಗಳ ಪಡಿತರದಿಂದಲೇ ಒಂದು ಕೆಜಿ ಅಕ್ಕಿ ಒಂದು ರುಪಾಯಿಗೆ ಸಿಗುತ್ತದೆ. ಈ ಯೋಜನೆ ನಿರಂತರ.
- ದಿನೇಶ್ ಗುಂಡೂರಾವ್, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ರಾಜ್ಯ ಸಚಿವ

ಹೆಚ್ಚಾಯ್ತು ಜನಸಂಖ್ಯೆ
ರಾಜ್ಯದಲ್ಲಿ ಲಕ್ಷಾಂತರ ಬೋಗಸ್ ಬಿಪಿಎಲ್ ಕಾರ್ಡ್‌ಗಳಿರುವುದನ್ನು ಅಂಕಿ- ಅಂಶಗಳೇ ಸ್ಪಷ್ಪಪಡಿಸುತ್ತವೆ. ರಾಜ್ಯದಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್‌ಕಾರ್ಡ್‌ಗಳ ಸಂಖ್ಯೆ 98,35,701. ಬಡತನ ರೇಖೆಗಿಂತ ಮೇಲಿರುವ (ಎಪಿಎಲ್) ಕಾರ್ಡ್‌ಗಳ ಸಂಖ್ಯೆ 35,26,773. ಅನ್ನಭಾಗ್ಯ ಯೋಜನೆ ಅಂದಾಜಿನ ಪ್ರಕಾರ 5.7 ಕೋಟಿ ಜನರು ಫಲಾನುಭವಿಗಳು. ಇದರಲ್ಲಿ ಎಪಿಎಲ್ ಕಾರ್ಡ್‌ನಲ್ಲಿರುವವರು ಸೇರಿಲ್ಲ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿರುವ 6.11 ಕೋಟಿ ಜನರಿದ್ದಾರೆ. ಬಿಪಿಎಲ್ ಹಾಗೂ ಅಂತ್ಯೋದಯ ವ್ಯಾಪ್ತಿಯಲ್ಲೇ 5.7ಕೋಟಿ ಜನರಿದ್ದರೆ. ಇನ್ನು ಅದಕ್ಕಿಂತ ಮೇಲಿರುವ ಜನರು ಕೇವಲ 41 ಲಕ್ಷ ಮಾತ್ರವೇ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರೆತಿಲ್ಲ. ನಕಲಿ ಅಥವಾ ಬೋಗಸ್ ಬಿಪಿಎಲ್ ಕಾರ್ಡ್‌ಗಳು ರದ್ದಾದಾಗ ಮಾತ್ರ 'ಅನ್ನಭಾಗ್ಯ'ಕ್ಕೆ ನೈಜ ಫಲಾನುಭವಿಗಳು ಅರ್ಹರಾಗುತ್ತಾರೆ.

  • ಒಟ್ಟು ಬಿಪಿಎಲ್ ಕಾರ್ಡ್‌ಗಳು: 87,00,740
  • ಒಬ್ಬರೇ ಸದಸ್ಯರಿರುವ ಕಾರ್ಡ್‌ಗಳು: 3,60,200
  • ಇಬ್ಬರು ಸದಸ್ಯರಿರುವ ಕಾರ್ಡ್‌ಗಳು:  8,30,742
  • ಇಬ್ಬರಿಗಿಂತ ಹೆಚ್ಚು ಸದಸ್ಯರಿರುವ ಕಾರ್ಡ್: 75,09,798
  • ಅಂತ್ಯೋದಯ ಕಾರ್ಡ್‌ಗಳು: 11,34,96
  • ಒಬ್ಬ ಸದಸ್ಯನ ಕಾರ್ಡ್‌ಗೆ ತಿಂಗಳಿಗೆ: 10 ಕೆಜಿ ಅಕ್ಕಿ
  • ಎರಡು ಕಾರ್ಡ್‌ಗೆ ತಿಂಗಳಿಗೆ: 20 ಕೆಜಿ ಅಕ್ಕಿ
  • ಎರಡಕ್ಕಿಂತ ಹೆಚ್ಚಿರುವ ಕಾರ್ಡ್‌ಗೆ: 30 ಕೆಜಿ ಅಕ್ಕಿ
  • ಅಂತ್ಯೋದಯ ಕಾರ್ಡ್‌ಗೆಳ:  35 ಕೆಜಿ ಅಕ್ಕಿ

ಒಟ್ಟು ಫಲಾನುಭವಿಗಳು   5.7 ಕೋಟಿ
ಅಗತ್ಯವಿರುವ ಅಕ್ಕಿ    2,78,428 ಮೆಟ್ರಿಕ್ ಟನ್
ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಹೊರೆ     4500 ಕೋಟಿ
ಒಟ್ಟು ನ್ಯಾಯಬೆಲೆ ಅಂಗಡಿಗಳು     20,459

ಬಿಡಿಎ ಅರ್ಕಾವತಿ ಬಡಾವಣೆ ಗೋಳು



ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ:   09-07-2013

Wednesday, July 3, 2013